ಸುಳ್ಯ (ವಿಶ್ವ ಕನ್ನಡಿಗ ನ್ಯೂಸ್) : ಮದರಸ ತರಗತಿ ನಡೆಸುತ್ತಿರುವ ಸ೦ದರ್ಭದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು, ಮದ್ರಸ ಅಧ್ಯಾಪಕರೋರ್ವರು ಮೃತಪಟ್ಟ ಘಟನೆ ಕಳಂಜದಲ್ಲಿ ನಡೆದಿದೆ.
ಬೆಳ್ಳಾರೆ ತ೦ಬಿನಮಕ್ಕಿ ನಿವಾಸಿ ರಶೀದ್ ಮುಸ್ಲಿಯಾರ್ ಹೃದಯಾಘಾತದಿ೦ದ ನಿಧನರಾದ ಅಧ್ಯಾಪಕರಾಗಿದ್ದಾರೆ. ಅವರಿಗೆ 51 ವರ್ಷ ವಯಸ್ಸಾಗಿತ್ತು.
ಇಂದು ಮುಂಜಾನೆ ಮದರಸ ತರಗತಿ ನಡೆಸುತ್ತಿರುವ ಸ೦ದರ್ಭದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ಅವರನ್ನು ಕೂಡಲೇ ಪುತ್ತೂರು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ಮಾಡಾವು ತಲುಪುವಷ್ಟರಲ್ಲಿ ಅವರು ಮೃತಪಟ್ಟರೆನ್ನಲಾಗಿದೆ.
ಇವರು ಹಲವಾರು ವರ್ಷಗಳಿ೦ದ ಬೆಳ್ಳಾರೆಯಲ್ಲಿ ಬುಕ್ ಸ್ಟಾಲ್ ಮತ್ತು ಸುಗ೦ಧ ದ್ರವ್ಯ ವ್ಯಾಪಾರ ನಡೆಸುತ್ತಿದ್ದರು, ಮತ್ತು ಕೆಲವು ಮಸೀದಿಗಳ ಉಸ್ತಾದರುಗಳು ರಜೆಯ ಸಮಯದಲ್ಲಿ ಅವರ ಬದಲಿಗೆ ಕೆಲಸವನ್ನು ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಮೃತರು ಪತ್ನಿ ಇಬ್ಬರು ಪುತ್ರಿಯರು ಹಾಗೂ ಒರ್ವ ಪುತ್ರನನ್ನು ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.