ನವದೆಹಲಿ(ವಿಶ್ವ ಕನ್ನಡಿಗ ನ್ಯೂಸ್) : ರಾಜಸ್ಥಾನದಲ್ಲಿ ಧರ್ಮನಿಂದನೆ ಆರೋಪದ ಮೇಲೆ ಟೈಲರ್ ಕನಯಾಲಾಲ್ ಅವರನ್ನು ಕೊಂದ ಪ್ರಕರಣದ ಆರೋಪಿಗಳಾದ ರಿಯಾಜ್ ಅಥಾನ್ ಮತ್ತು ಮೊಹಮ್ಮದ್ ಗೌಸ್ ಅವರು ಸುಮಾರು ಮೂರು ವರ್ಷಗಳಿಂದ ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದಕ್ಕೆ ಪುರಾವೆಗಳ ಸಹಿತ ಇಂಡಿಯಾ ಟುಡೇ ಬಹಿರಂಗಪಡಿಸಿದೆ.
ನೂಪುರ್ ಶರ್ಮಾ ದೂಷಣೆ ವಿಚಾರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಪ್ರತಿಭಟನೆ ವ್ಯಕ್ತವಾಗಿ ಬಿಜೆಪಿ ರಕ್ಷಣಾತ್ಮಕವಾಗಿ ನಿಂತಿದ್ದ ಸಂದರ್ಭದಲ್ಲೇ ಈ ಕ್ರೂರ ಹತ್ಯೆ ನಡೆದಿರುವುದು ಷಡ್ಯಂತ್ರದ ಭಾಗವಾಗಿರಬಹುದು ಎಂದು ಹೇಳಲಾಗುತ್ತಿದೆ. ಇಂತಹ ಕಾರಣಗಳು ಸಿಕ್ಕಾಗ ಸಾಮಾನ್ಯವಾಗಿ ಮುಸಲ್ಮಾನರ ವಿರುದ್ಧ ಗಲಭೆ ಎಬ್ಬಿಸುವ ಗ್ಯಾಂಗ್ ಗಳು ಈ ಬಾರಿ ಅವರ ಅಸಾಮಾನ್ಯ ಸ್ವಯಂ ಸಂಯಮದ ಬಗ್ಗೆಯೂ ಅನುಮಾನ ಮೂಡಿಸಿವೆ.
https://twitter.com/indiatoday/status/1542890364121812992?s=21&t=MU0xVAYxJTcWvlYUKwyvQA
ಆರೋಪಿಗಳು ಸ್ಥಳೀಯ ಬಿಜೆಪಿ ನಾಯಕರ ಜೊತೆಗಿರುವ ಫೋಟೋಗಳು ಹೊರಬಿದ್ದ ಹಿನ್ನೆಲೆಯಲ್ಲಿ ಸ್ಥಳೀಯ ಬಿಜೆಪಿ ನಾಯಕರು ತಮ್ಮ ಬಿಜೆಪಿ ಸಂಪರ್ಕವನ್ನು ಒಪ್ಪಿಕೊಳ್ಳಬೇಕಾಯಿತು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.