ಪಟ್ಟಣದ ಆಜಾದ್ರಸ್ತೆಯ ವಿದ್ಯಾರ್ಥಿ ಮನೆ ಹತ್ತಿರ ನಡೆದ ಸರಳ ಸಮಾರಂಭದಲ್ಲಿ ರೋಟರಿ ಕ್ಲಬ್ ಸೆಂಟರಲ್ ಹಾಗೂ ವಾಕಿಂಗ್ ಗಳೆಯರ ಬಳಗದಿಂದ ವತಿಯಿಂದ ನಡೆದ ಸಭೆಯಲ್ಲಿ ಡಾ|| ವೆಂಕಟಾಚಲ ವಿದ್ಯಾರ್ಥಿನಿ ಮಿಸ್ಬಾ ತಬಸ್ಸುಮ್ ತಂದೆ ತಾಯ ಮತ್ತು ಪ್ರಾಂಶುಪಾಲರುಸನ್ಮಾನಿಸಿದರು.
ಶ್ರೀನಿವಾಸಪುರ:( ವಿಶ್ವಕನ್ನಡಿಗ ನ್ಯೂಸ್ ) ವಿದ್ಯಾರ್ಥಿ ಹಾಗು ಶಿಕ್ಷಕ ಒಂದೇ ನಾಣ್ಯದ ಎರಡು ಮುಖಗಳಂತೆ , ವಿದ್ಯಾರ್ಥಿಗೆ ಕಲಿಯುವ ಆಸಕ್ತಿ ಇರಬೇಕು ಶಿಕ್ಷಕನಿಗೆ ಕಲಿಸುವ ಆಸಕ್ತಿ ಇರಬೇಕು ಗುರು ಶಿಷ್ಯರ ಭಾಂದವ್ಯ ಉತ್ತಮವಾಗಿದರೆ , ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ವಿದ್ಯಾರ್ಥಿನಿಯೇ ಸಾಕ್ಷಿ ರೋಟರಿ ಕ್ಲಬ್ ಸೆಂಟೆರಲ್ ಡಾ || ವೆಂಕಟಾಚಲ.
ಪಟ್ಟಣದ ಅಜಾದ್ ರಸ್ತೆಯ ವಿದ್ಯಾರ್ಥಿ ಮನೆ ಹತ್ತಿರ ನಡೆದ ಸರಳ ಸಮಾರಂಭದಲ್ಲಿ ರೋಟರಿ ಕ್ಲಬ್ ಸೆಂಟರಲ್ ಹಾಗೂ ವಾಕಿಂಗ್ ಗಳೆಯರ ಬಳಗದಿಂದ ವತಿಯಿಂದ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಮಿಸ್ಬಾ ತಬಸ್ಸುಮ್ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ವಿಜ್ಞಾನ ವಿಭಾಗದಲ್ಲಿ( ರಾಸಾಯನಶಾಸ್ತ್ರ)ಚಿನ್ನದ ಪದಕ ಪಡೆದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗೆ ಸನ್ಮಾನಸಿ ಮಾತನಾಡಿದರು.
ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪ್ರಥಮ ದರ್ಜೆ ಕಾಲೇಜುವರೆಗೂ ಸರ್ಕಾರಿ ಶಾಲಾ ಕಾಲೇಜಿನಲ್ಲಿಯೇ ಓದಿ ವಿಜ್ಞಾನ ವಿಭಾಗದಲ್ಲಿ(ರಾಸಾಯನಶಾಸ್ತ್ರ)ದಲ್ಲಿ ಚಿನ್ನದ ಪದಕವನ್ನು ಪಡೆದಿರುವುದ ನಮ್ಮ ತಾಲ್ಲೂಕಿಗೆ ಹೆಮ್ಮವಿಚಾರವಾಗಿದೆ.
ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಕರಿದ್ದು, ಸರ್ಕಾರಿ ಶಾಲೆಯಲ್ಲಿ ಓದುವಂತಹ ವಿದ್ಯಾರ್ಥಿಗಳಿಗೆ ಒಳ್ಳೆಯ ಮೌಲ್ಯಯುತ ಶಿಕ್ಷಣವನ್ನು ನೀಡುತ್ತಿದ್ದು, ಆರ್ಥಿಕ ಸ್ಥಿತಿವಂತರು ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಹಾಗೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹಿಸದರೆ ಒಳ್ಳೆಯ ಇಂತಹ ಅನೇಕ ವಿದ್ಯಾರ್ಥಿಗಳು ಚಿನ್ನಪದಕವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಸಣ್ಣವೀರಯ್ಯ ಮಾತನಾಡಿ ಹೆಣ್ಣುಮಕ್ಕಳಿಗೆ ಶಿಕ್ಷಣವನ್ನು ನೀಡಿದರೆ ಅವರ ಜೀವನಕ್ಕೆ ಆಧಾರ ಸ್ಥಂಭವಾಗುತ್ತದೆ. ಈ ಹೆಣ್ಣುಮಗು ಇತರೆ ಹೆಣ್ಣುಮಕ್ಕಳಿಗೆ ಪೇರಣೆಯಾಗಿದ್ದು , ಪ್ರತಿಯೊಬ್ಬ ತಂದೆ ತಾಯಿಯು ತಮ್ಮ ಹೆಣ್ಣುಮಗುವಿಗೆ ಒಳ್ಳೆಯ ಶಿಕ್ಷವನ್ನು ಕೊಡಿಸಿ ವಿದ್ಯಾಂತರಾಗಿಸಬೇಕು ಎಂದು ಮನವಿ ಮಾಡಿದರು. ಪುರಸಭೆ ಉಪಾಧ್ಯಕ್ಷೆ ಆಯಿಶಾ ನಯಜ್ ಮಾತನಾಡಿ ವಿದ್ಯಾರ್ಥಿಗಳು ಶ್ರಮಪಟ್ಟು ವಿದ್ಯಾಭ್ಯಾಸ ಮಾಡುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗಾವಕಾಶಗಳಿಸುವದು ಕಷ್ಟ ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ನಿರ್ಧಿಷ್ಟ ಗುರಿಯೊಂದಿಗೆ ಶ್ರದ್ಧೆಯಿಂದ ಶಿಕ್ಷಕರು ಭೋದಿಸುಂತಹ ಪಾಠಪ್ರವಚನಗಳನ್ನು ಆಲಿಸಿ ಜೀವನದ ಗುರಿಯನ್ನ ಸಾಧಿಸಿ ಎಂದು ಸಲಹೆ ನೀಡಿದರ.
ಸೈಯದ್ ಖಾದರ್ , ಮಿಲನ್ಸರ್ ಮಾವು ಮಂಡಿ ಮಾಲೀಕ ಮುಜಮಿಲ್ ಖಾನ್ ,ಪುರಸಭೆ ಸದಸ್ಯ ಕೆ ಅನೀಸ್ ಅಹಮದ್ ಜಾಮಿಯಾ ಮಸೀದಿ ಅಧ್ಯಕ್ಷ ಝಾಹಿದ್ ಅನ್ಸಾರಿ ,ಅಕ್ಬರ್ ಷರೀಫ್ , ಮುಸ್ಲಿಂ ಎಂಪ್ಲಾಯಿಸ್ ಅಸೋಸಿಯೇಷನ್ ಜನರಲ್ ಸೆಕ್ರೆಟರಿ ಸೈಯದ್ ಅಸ್ಗರ್ ಶಿಕ್ಷಣದ ಪ್ರಾಮುಖ್ಯತೆ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಆರ್ ಎಂ ಎಂ ತನ್ವೀರ್ ಫ್ರೂಟ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ವಿದ್ಯಾರ್ಥಿಗೆ ೨೫ ಸಾವಿರರೂಗಳನ್ನು , ಝಾಹಿದ್ ಅನ್ಸಾರಿ ೫ ಸಾವಿರ , ಅಕ್ಬರ್ ಶರೀಫ್ ೫ ಸಾವಿರ , ಸಯ್ಯದ್ ಖಾದರ್ ೫ ಸಾವಿರ , ಡಾ || ವೆಂಕಟಾಚಲ ರವರು ೫ ಸಾವಿರರೂಗಳ ಪ್ರೋತ್ಸಾಹ ಧನ ನೀಡಿದರು .
ಉಪನ್ಯಾಸಕರು ನವೀನ್ ಕುಮಾರ್ , ಮೃತ್ಯಂಯಜಯ , ರೋಟರಿ ಸಂಸ್ಥೆಯ ಸದಸ್ಯರಾದ ಸೀತರೆಡ್ಡಿ , ಶ್ರೀನಿವಾಸರೆಡ್ಡಿ ಇತರರು ಇದ್ದರು .
ವರದಿ ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.