ಅಮ್ಮೆಂಬಳ(ವಿಶ್ವಕನ್ನಡಿಗ ನ್ಯೂಸ್): ದ.ಕ.ಜಿಲ್ಲೆಯಲ್ಲಿ ಇಂದು ಮುಂಜಾನೆಯಿಂದಲೇ ಅತ್ಯಂತ ಸಡಗರ, ಸಂಭ್ರಮದಿಂದ ‘ಈದುಲ್ ಅಝ್ಹಾ’ ಆಚರಿಸಲಾಗುತ್ತಿದೆ. ಅಮ್ಮೆಂಬಳ ಕುರ್ನಾಡ್ ಕೇಂದ್ರ ಜಮಾ ಮಸ್ಜಿದ್ನಲ್ಲಿ ಮಸೀದಿಯ ಖತೀಬ್ ಅಲ್ ಹಾಜ್ ಸಯ್ಯಿದ್ ಆಮೀರ್ ಹಾಮಿದ್ ಇಂಬಿಚ್ಚಿ ಕೋಯ ತಂಙಳ್ ಅಮ್ಮೆಂಬಳ ನೇತೃತ್ವದಲ್ಲಿ ಈದ್ ನಮಾಝ್ ಮತ್ತು ಖುತ್ಬಾ ಪಾರಾಯಣ ನೆರವೇರಿತು.
ಮಸೀದಿಯ ಅಧ್ಯಕ್ಷ ಬಿ ಎಚ್ ಉಬೈದ್, ಪ್ರ ಕಾರ್ಯದರ್ಶಿ ಶಬೀರ್ ಕೋಟೆ, ಕೋಶಾಧಿಕಾರಿ ಆಸೀಫ್ ಅಬ್ದುಲ್ಲಾ ಹಾಗೂ ಊರಿನ ಅನೇಕ ಹಿರಿಯರು ಕಿರಿಯರು ಸೇರಿದಂತೆ ಎಲ್ಲರೂ ಪಾಲ್ಗೊಂಡಿದ್ದರು ಎಳೆಯ ಮಕ್ಕಳಿಂದ ಹಿಡಿದು ಹಿರಿಯರ ಸಹಿತ ಎಲ್ಲರೂ ಹೊಸ ಬಟ್ಟೆಬರೆ ಧರಿಸಿ, ಅತ್ತರ್ ಹಚ್ಚಿ ಹಬ್ಬವನ್ನು ಅತ್ಯಂತ ಶ್ರದ್ಧೆಯಿಂದ ಭಕ್ತಿಯಿಂದ ಸಂಭ್ರಮಿಸಿದರು.
ಈದ್ ನಮಾಝ್-ಖುತ್ಬಾದ ಬಳಿಕ ಅಮ್ಮೆಂಬಳ ಜಾರದಗುಡ್ಡೆ ದರ್ಗಾ ಸನ್ನಿದಿಗೆ ಯುವಕರೆಲ್ಲರೂ ತೆರಳಿ ಝೀಯಾರತ್ ಮಾಡಿ ಮುಸ್ಲಿಂ ಸಮುದಾಯದಿಂದ ಅಗಲಿದ ಸರ್ವ ಕುಟುಂಬದ ಸದಸ್ಯರ ಮಗ್ಫಿರತ್ ಮರ್ಹಮತ್’ಗಾಗಿ ಪ್ರಾರ್ಥನೆ ಸಲ್ಲಿಸಿ. ಬಳಿಕ ಕುಟುಂಬಸ್ಥರು, ಸ್ನೇಹಿತರು, ಸಮೀಪದ ನಿವಾಸಿಗಳ ಮನೆಗೆ ತೆರಳಿ ಈದ್ ಶುಭಾಶಯ ಕೋರಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.