(www.vknews.in) : ಅಗತ್ಯ ವಸ್ತುಗಳ ಮೇಲೂ ಜಿಎಸ್ ಟಿ ವಿಧಿಸುವ ಮೂಲಕ ಬಡವರ ಮೇಲೆ ಮತ್ತೊಂದು ಬರೆ ಎಳೆದಿದ್ದಾರೆ. ಜನಸಾಮಾನ್ಯರು ಜೀವನ ಮಾಡೋದು ಹೇಗೆ..? ಪೆಟ್ರೋಲ್ ಡೀಸೆಲ್, ಅಡುಗೆ ಎಣ್ಣೆ ಬೆಲೆ ಏರಿಕೆ ಆಯ್ತು ಈಗ ಅಗತ್ಯ ವಸ್ತುಗಳ ಮೇಲೂ ಜಿಎಸ್ ಟಿ. ಇದೇನಾ ಮೋದಿ ಹೇಳೀರೋ ಅಚ್ಚೇ ದಿನ್. ತೆರಿಗೆ ಹೆಸರಲ್ಲಿ ಬಡ ಮಧ್ಯಮ ಜನರ ರಕ್ತ ಹೀರುತ್ತಿದ್ದಾರೆ.
ಮೋದಿ ಅಧಿಕಾರಕ್ಕೆ ಬಂದು ಜನರಿಗೆ ಭ್ರಮೆ ಹುಟ್ಟಿಸಿದರು. ಬಡವರ ಹೊಟ್ಟೆಗೆ ಒದೆಯುವುದೇ ಅಚ್ಚೇ ದಿನ್ ಎಂದು ತಿಳಿದುಕೊಂಡಿರುವ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಊಟದ ತಟ್ಟೆಯಲ್ಲಿನ ಅಕ್ಕಿ, ಗೋಧಿ, ಹಾಲು, ಮೊಸರು, ಮಜ್ಜಿಗೆ, ಎಲ್ಲವನ್ನೂ ಕಿತ್ತುಕೊಳ್ಳಲು ಹೊರಟಿರುವುದು ಬಡವರ ಹತ್ಯೆಗೆ ಸಮನಾದ ಪಾಪ ಕರ್ಮ ಎಂದು ಅರಕಲಗೂಡು ಯುವ ಕಾಂಗ್ರೆಸ್ ಮುಖಂಡ ಜೀಷಾನ್ ಕಿಡಿಕಾರಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.