(www.vknews.in) : ಇಹಲೋಕದ ಜೀವನದಲ್ಲಿ ಮಾನವನ ಕ್ಷಣಿಕ ಬದುಕಿನಲ್ಲಿ ಸುದೀರ್ಘಕಾಲ ನೆನಪಿಸುವ ಏಕೈಕ ಸೇವೆಯಾಗಿದೆ ಜೀವದಾನ ಅದುವೆ ರಕ್ತದಾನ ಎಂದು ಶಾಸಕರಾದ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಅವರು ಇಂದು ಮರ್ಹೂಂ ಇಲ್ಯಾಸ್ ಮುಹಮ್ಮದ್ ಹರೇಕಳ ಇವರ ಸ್ಮರಣಾರ್ಥ ಸಾಗರ್ ಕಲೆಕ್ಷನ್ & ರೂಪಮ್ ತೊಕ್ಕೊಟ್ಟು ಸಾಗರ್ ವೆಡ್ಡಿಂಗ್ ಮಂಗಳೂರು ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಇದರ ಆಶ್ರಯದಲ್ಲಿ ಯೆನಪೊಯ ಆಸ್ಪತ್ರೆ ದೇರಳಕಟ್ಟೆ ಇವರ ಸಹಕಾರದಲ್ಲಿ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಯ 143 ನೇ ಸಾರ್ವಜನಿಕ ಬ್ರಹತ್ ರಕ್ತದಾನ ಶಿಬಿರವನ್ನು ತೊಕ್ಕೊಟ್ಟು ಸಾಗರ್ ಕಲೆಕ್ಷನ್ ಮಳಿಗೆಯ ಮುಂಭಾಗದಲ್ಲಿ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಸಮಾರಂಭ ಉದ್ಘಾಟಿಸಿ ಸ್ಯಯ್ಯದ್ ಮದನಿ ಚಾರಿಟೇಬಲ್ ಇದರ ಅದ್ಯಕ್ಷರಾದ ಅಬ್ದುಲ್ ರಷೀದ್ ಹಾಜಿ ಮಾತಾಡಿ ಸಮಾಜಕ್ಕೆ ಮಾರಕವಾದ ಯಾವುದೇ ಮಾಹಿತಿಯನ್ನು ವೈರಲ್ ಮಾಡದೇ ಸಮಾಜಕ್ಕೆ ಪೂರಕವಾದ ರಕ್ತದಾನದಂತಹ ಮಹತ್ವದ ಸೇವಾ ಕಾರ್ಯವನ್ನು ಜನರಿಗೆ ತಲುಪಿಸಿರಿ ಎಂದು ಹೇಳಿದರು.
ಸಮಾರಂಭದ ಅದ್ಯಕ್ಷತೆ ವಹಿಸಿ ಮಾತಾಡಿದ ಸಾಗರ್ ಕಲೆಕ್ಷನ್ ತೊಕ್ಕೊಟ್ಟು ಇದರ ಪಾಲುದಾರರಾದ ಇಸ್ಮಾಯಿಲ್ ಯು.ಎ. ಮಾತಾಡಿ ಸಂಘ ಸಂಸ್ಥೆಗೆ ನಮ್ಮಿಂದ ಲಾಭ ಆಗಬೇಕೇ ಹೊರತು ನಮಗೆ ಸಂಸ್ಥೆಯಿಂದ ಯಾವುದೇ ಲಾಭ ಆಗದೇ ಜನರ ಪ್ರೀತಿ ವಿಶ್ವಾಸ ಗಳಿಸಲು ಪ್ರೇರಣೆಯಾಗಲಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಚಿರುಂಭ ಭಗವತಿ ಕ್ಷೇತ್ರ ಉಳ್ಳಾಲ ಇದರ ಅದ್ಯಕ್ಷರಾದ ಚಂದ್ರಹಾಸ್ ಉಳ್ಳಾಲ,ಡೆಪ್ಯುಟಿ ಕಮಿಷನರ್ ಆಫ್ ಪೋಲಿಸ್ ದಿನೇಶ್ ಕುಮಾರ್,ಅಸಿಸ್ಟೆಂಟ್ ಕಮೀಷನರ್ ಆಫ್ ಪೋಲಿಸ್ ದಿನಕರ್ ಶೆಟ್ಟಿ, ಮಂಗಳೂರು ಉತ್ತರ ಅಸಿಸ್ಟೆಂಟ್ ಕಮಿಷನರ್ ಎಸ್ ಮಹೇಶ್ ಕುಮಾರ್,ನ್ಯಾಯಾಧೀಶರಾದ ಅಬ್ದುಲ್ ಸಲೀಂ, ಉಳ್ಳಾಲ ಸರ್ಕಲ್ ಇನ್ಸ್ಪೆಕ್ಟರ್ ಸಂದೀಪ್ ಜಿ ಎಸ್,ಮುಸ್ಲಿಂ ಸೆಂಟ್ರಲ್ ಕಮಿಟಿ ಕಾರ್ಯದರ್ಶಿ ಯು.ಬಿ.ಸಲೀಮ್, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಯ ಅದ್ಯಕ್ಷರಾದ. ನಝೀರ್ ಹುಸೇನ್, ಉಳ್ಳಾಲ ನಗರ ಸಭಾ ಉಪಾಧ್ಯಕ್ಷರಾದ ಅಯ್ಯೂಬ್ ಯು.ಪಿ. ಕರಾವಳಿ ರೆಡಿಮೆಡ್ ಟೆಕ್ಸ್ ಟೈಲ್ ಇದರ ಅದ್ಯಕ್ಷರಾದ ಸಂತೋಷ್ ಕಾಮತ್,ಉಳ್ಳಾಲ ಮುಸ್ಲಿಂ ಒಕ್ಕೂಟ ಸ್ಥಾಪಕ ಅದ್ಯಕ್ಷರಾದ ಝಾಕಿರ್ ಉಳ್ಳಾಲ್, ನಗರಸಭಾ ಸದಸ್ಯರಾದ ಬಾಝಿಲ್ ಡಿಸೋಜ,ಉದ್ಯಮಿ ಅಬ್ದುಲ್ ನಾಸಿರ್ ಸಾಮಣಿಗೆ, ಸ್ಮಾರ್ಟ್ ಸಿಟಿ ಪ್ಲಾನೆಟ್ ಸಂಘದ ಅದ್ಯಕ್ಷರಾದ ಸಲೀಮ್ ಕುಂಪಲ, ಉಳ್ಳಾಲ ಕ್ರೆಡಿಟ್ ಬೋರ್ಡ್ ಉಪಾಧ್ಯಕ್ಷ ರಾದ ಮೊಹಿನುದ್ದೀನ್ ಉಳ್ಳಾಲ,ಸ್ಪೋರ್ಟ್ಸ್ ವಿನ್ನರ್ ಮಾಲಕ ರಿಯಾಝ್,ಸಮಾಜ ಸೇವಕ ಬದ್ರುದ್ದೀನ್, ಇಸ್ಮಾಯಿಲ್, ಮರ್ಹೂಂ ಇಲ್ಯಾಸ್ ಮಹಮ್ಮದ್ ಹರೇಕಳ ಇವರ ಸಹೋದರ ಅಬ್ಬು,ಮೊಹಿದಿನ್,ತೌಫೀಕ್, ಹಾಗೂ ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಸಪ್ವಾನ್ ಕಲಾಯಿ,ಕೋಶಾಧಿಕಾರಿ ಸತ್ತಾರ್ ಪುತ್ತೂರು, ಕಾರ್ಯದರ್ಶಿ ತಸ್ಲೀಮ್ ಹರೇಕಳ, ಶಿಬಿರದ ಉಸ್ತುವಾರಿ ಇಂತಿಯಾಝ್ ಬಜಪೆ, ವ್ಯವಸ್ಥಾಪಕರಾದ ನವಾಝ್ ಉಳ್ಳಾಲ,ಸಂಚಾಲಕರಾದ ಶಂಸುದ್ದೀನ್ ಬಲ್ಕುಂಜೆ,ರಕ್ತ ಪೂರೈಕೆ ವಿಭಾಗದ ಮುಖ್ಯಸ್ಥ ಮುಸ್ತಫಾ ಕೆ ಸಿ ರೋಡ್,ಶಿಬಿರದ ಉಸ್ತುವಾರಿ ಖಾದರ್ ಮುಂಚೂರು,ಸಿರಾಜ್ ಉಳಾಯಿ ಬೆಟ್ಟು,ಕಾರ್ಯ ನಿರ್ವಾಹಕರಾದ ರಾಫಿಝ್ ಕ್ರಷ್ಣಾಪುರ, ನಝೀಬ್ ಪಡುಬಿದ್ರೆ,ನಿಹಾನ್ ಉಳ್ಳಾಲ, ದಿಲ್ ಶಾನ್ ಉಳ್ಳಾಲ,ಅಲ್ಮಾಝ್ ಉಳ್ಳಾಲ,(ನೌಫಲ್ ಇಪ್ತಿಕಾರ್),ಝಾಕಿರ್ ಇಕ್ಲಾಸ್,ಹಾರಿಫ್, ಅಶ್ರಫ್ ಮಂಚಿಲ ಉಪಸ್ಥಿತರಿದ್ದರು.
ಅಕ್ಷರ ಸಂತ ಹರೇಕಳ ಹಾಜಬ್ಬ ರವರಿಗೆ ಸಂದರ್ಭದಲ್ಲಿ ಸನ್ಮಾನ ಮಾಡಲಾಯಿತು,ಸಾಗರ್ ಕಲೆಕ್ಷನ್ ಇದರ ಪಾಲುದಾರರಾದ ಅಬ್ದುಲ್ ರಹಿಮಾನ್ ಸ್ವಾಗತಿಸಿದರು, ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಮಾದ್ಯಮ ವಿಭಾಗದ ಮುಖ್ಯಸ್ಥ ಅಬ್ದುಲ್ ಹಮೀದ್ ಗೋಳ್ತಮಜಲ್ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ನೂರ ಮೂವತ್ತೆರಡು ಯುನಿಟ್ ರಕ್ತ ಸಂಗ್ರಹಿಸಲಾಯಿತು. ದಾನಿಗಳಿಗೆ ಸ್ಮರಣಿಕೆ ಹಾಗೂ ಉಡುಗೊರೆ ನೀಡಲಾಯಿತು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.