(ವಿಶ್ವ ಕನ್ನಡಿಗ ನ್ಯೂಸ್) : ಚಿಕ್ಕವನಾಗಿದ್ದಾಗ ಕಲಿಕೆಗೆಂದು ಮಂಗಳೂರು ಸಮೀಪದ ಊರೊಂದಕ್ಕೆ ಹೋಗಿದ್ದೆ. ಅಲ್ಲಿ ಪ್ರಾಯವಿರುವ ಮಹಿಳೆಯೊಬ್ಬರು ನನ್ನಲ್ಲಿ ಕೇಳಿದರು. ಯಾವ ಊರಿಂದ ಬಂದದ್ದು?, ನಾನು “ಪುತ್ತೂರು” ಅಂದೆ, ತಟ್ಟನೆ ಆ ಮಹಿಳೆ ನಿನಗೆ ಹುಸೈನ್ ಕುಟ್ಟಿ ಹಾಜಿಯನ್ನು ಗೊತ್ತುಂಟಾ ಎಂದು ಕೇಳಿದರು. ನನ್ನ ಊರವರು ಅಂದೆ. ಆ ಬಳಿಕ ನನ್ನನ್ನು ಕಾಣ ಸಿಕ್ಕಾಗಲೆಲ್ಲ ಆ ಮಹಿಳೆ ಗಂಟೆಕಟ್ಟಲೆ ಹುಸೈನ್ ಕುಟ್ಟಿ ಊಸ್ತಾದರ ಮದ್ಹ್ ಹೇಳುತ್ತಿದ್ದರು.
ನಮ್ಮ ಊರ ಬೆಳಕಾಗಿದ್ದರೂ ನಾನು ತಿಳಿಯುವ ಅದೆಷ್ಟೋ ದುಪ್ಪಟ್ಟು ಆ ಮಹಿಳೆ ಉಸ್ತಾದರ ಬಗ್ಗೆ ಹೇಳುತ್ತಿದ್ದರು. ಮಂಜನಾಡಿ ಮೂಲದ ಆ ಮಹಿಳೆ ಈಗಲೂ ಹಯಾತ್ ನಲ್ಲಿದ್ದಾರೆ. ಅಲ್ಲಾಹು ದೀರ್ಘಾಯುಷ್ಯ ನೀಡಲಿ. ಆಮೀನ್..
ಹುಸೈನ್ ಕುಟ್ಟಿ ಹಾಜಿ ಉಸ್ತಾದ್ ಅವರು ಒಂದು ಕಾಲದ ಜಿಲ್ಲೆಯ ವಿದ್ವತ್ ದೀಪವಾಗಿದ್ದರು. ಸುಳ್ಯ, ಬಿಸಿರೋಡ್, ಅಡ್ಯನಡ್ಕ, ಬಂಟ್ವಾಳ, ವಿಟ್ಲ, ಮಂಜನಾಡಿ ಮುಂತಾದ ಜಿಲ್ಲೆಯ ವಿವಿದೆಡೆ ಮುದರ್ರಿಸ್ ಮತ್ತು ಖತೀಬರಾಗಿ ಅವರು ಸೇವೆ ಸಲ್ಲಿಸಿದ್ದಾರೆ. ಪ್ರಭಾಷಣ ಲೋಕದ ಅಪ್ರತಿಮ ವಾಗ್ಪಟುವಾಗಿದ್ದರು ಉಸ್ತಾದ್, ಅವರ ಪ್ರಭಾಷಣಕ್ಕೆ ಜಿಲ್ಲೆಯ ವಿವಿದೆಡೆಗಳಿಂದ ಜನೋಸ್ತಮವೇ ಹರಿದು ಬರುತ್ತಿತ್ತು. ಆಧ್ಯಾತ್ಮಿಕ ರಂಗದಲ್ಲೂ ಅವರು ಪ್ರಶೋಭಿತ ತಾರೆಯಾಗಿದ್ದರು. ಚಿಕ್ಕಂದಿನಿಂದಲೇ ವಲಿಯುಲ್ಲಾಹಿ ಜಾವಗಲ್ ಬಾಬಾರ ಸಹಿತ ಅಂದಿನ ಎಲ್ಲಾ ಆಧ್ಯಾತ್ಮಿಕ ಪುರುಷರೊಂದಿಗೂ ಅವಿನಾಭಾವ ಸಂಪರ್ಕ ಅವರಿಗಿತ್ತು.
‘ಲಾ ಇಲಾಹ ಇಲ್ಲಲಾಲಾಹ್’ ಉಚ್ಚರಿಸಿ ಇಹಲೊಕ ತ್ಯಜಿಸಿದ ಉಸ್ತಾದರ ಜೀವನ ಸೂಕ್ಷತೆಯ ಪರ್ಯಾಯವಾಗಿತ್ತು. ವಿನಯದ ಪ್ರತೀಕವಾಗಿದ್ದರು, ನಡೆಯುವಾಗ ಕೂಡಾ ಒಂದು ಬಾಗಕ್ಕೆ ಸರಿದು ನಡೆಯುತ್ತಿದ್ದರು. ಜೀವನವೇ ಸರ್ವರಿಗೂ ಮಾದರಿಯಾಗಿತ್ತು. ಅವರ ಮರಣ ಹೊಂದುವಾಗ ಅವರ ಸೊತ್ತಾಗಿ ಕೈಯಲ್ಲಿ ಒಂದು ಉಂಗುರ ಕೂಡಾ ಬಾಕಿಯಿರಲಿಲ್ಲ. ಬಾಕಿಯಿದ್ದದ್ದು ಕೆಲವೊಂದು ಕಿತಾಬ್ ಗಳು ಮಾತ್ರವಾಗಿತ್ತು. ವಿದ್ಯೆ ಮಾತ್ರವಾಗಿತ್ತು ಅವರ ಅನಂತರ ಸೊತ್ತು.
ಅವರೊಂದು ಪ್ರತಿಭಾನ್ವಿತ ಮುದರ್ರಿಸರಾಗಿದ್ದರು. ಸಾಕಷ್ಟು ಶಿಷ್ಯ ಸಂಪತ್ತು ಅವರಿಗಿತ್ತು. ಅವರೊಬ್ಬ ಸಮರ್ಥ ಖತೀಬ್ ಕೂಡಾ ಆಗಿದ್ದರು. ಅವರ ಜುಮಾ ಭಾಷಣಕ್ಕೆ ಜನ ಸಂದಣಿ ಸೇರುತ್ತಿತ್ತು. ಅವರ ಪ್ರಭಾಷಣ ಅದಷ್ಟು ಪ್ರಭಾವ ಬೀರುತ್ತಿತ್ತು. ಅವರ ಖುರ್ಹಾನ್ ಪಾರಾಯಾಣ ಶೈಲಿ ಆಭೂತಪೂರ್ವವಾಗಿತ್ತು. ಖುರ್ಆನೇ ಅವರ ಜೀವನ ಶೈಲಿಯಾಗಿತ್ತು.
ರೆಂಜಲಾಡಿಯ ಅಂದಿನ ಧಾರ್ಮಿಕ ಪರಿಸ್ಥಿತಿ ಬಹಳ ಶೋಚನೀಯವಾಗಿತ್ತು. ಮಕ್ಕಳು ಮದ್ರಸಕ್ಕಾಗಿ ದೂರದ ವಾಲೆಮುಂಡೊವನ್ನೋ, ಬಡಕೋಡಿಯನ್ನೋ ಆಶ್ರಯಿಸಬೇಕಿತ್ತು. ಇದನ್ನು ಮನಗಂಡು ಅವರು ತನ್ನ ಮನೆಯಲ್ಲೇ ಮದ್ರಸಾ ಆರಂಭಿಸಿದರು. ಆ ಬಳಿಕ ಕಡ್ಯದ ಮದ್ರಸಾ, ರೆಂಜಲಾಡಿಯ ಮಸೀದಿ ಸ್ಥಾಪಿಸುವುದರಲ್ಲಿ ಅವರ ಪಾತ್ರ ಮಹತ್ತರವಾದದ್ದು.
ಇಂದು ಕೂಡಾ ಬೆಳವಣಿಗೆ ಕಂಡ ರೆಂಜಲಾಡಿ ಬದ್ರಿಯಾ ಮಸೀದಿ, ಮದ್ರಸಾದ ಮುಂದೆ ಅವರೊಬ್ಬ ರಾಜರಂತೆ ವಿಶ್ರಾಂತಿಯಲ್ಲಿದ್ದಾರೆ. ಮದ್ರಸಾದಲ್ಲಿ ಮಕ್ಕಳು ಓದುವ ಪವಿತ್ರ ಖುರ್ಆನಿನ ಪ್ರತಿಯೊಂದು ಸೂಕ್ತದ ಪ್ರತಿಪಲ ಆ ಸನ್ನಿಧಿಗೆ ನಿರಂತರವಾಗಿ ಹರಿದು ಹೋಗುತ್ತಿದೆ.
ಪುಟಗಳಿಗೂ ನಿಲುಕದ ಅವರ ಮಹಾತ್ಮೆ ಈ ಕಿರು ಬರಹದಲ್ಲಿ ಸಾದ್ಯವೇ ಇಲ್ಲ. ಅದನ್ನೊಂದು ಪುಸ್ತಕ ರೂಪಕ್ಕೆ ಇಳಿಸಿ ನವತಲೆಮಾರಿಗೆ ತಿಳಿಸುವ ಕಾರ್ಯ ನಡೆಯಲಿ ಎಂದು ಆಶಿಸುತ್ತೇನೆ. ಮುಹರ್ರಂ ತಿಂಗಳು ಅವರು ಇಹಲೋಕ ತ್ಯಜಿಸಿದ ತಿಂಗಳು, ಅದೇ ರೀತಿ ರೆಂಜಲಾಡಿಯ ಮತ್ತೊರ್ವ ಬೆಳಕು ವಲಿಯುಲ್ಲಾಹಿ ಮಶ್ಹೂರ್ ವಾಲೆಮುಂಡೋವು(ರ)ರವರ ಸೇವಕರೂ ಆದ ಕಡ್ಯ ಕುಟುಂಬದ ಸಾರಥಿ ಮರ್ಹೂಂ ಕುಟ್ಯಾಮಿ ಉಪ್ಪಾಪ ಕೂಡಾ ನಮ್ಮಿಂದಗಲಿದ ತಿಂಗಳು ಮುಹರ್ರಂ ಆಗಿದೆ.
ಆದೇ ರೀತಿ ನಮ್ಮಿಂದ ಅಗಲಿದ ಎಲ್ಲರ ಹೆಸರಲ್ಲಿ ನಡೆಯುವ ಅನುಸ್ಮರಣಾ ಸಂಗಮ ಯಶಸ್ಸಿಯಾಗಲಿ. ಅವರ ಬರ್ಕತ್ ನಿಂದ ಅಲ್ಲಾಹು ನಮ್ಮೆಲ್ಲರನ್ನು ಇಹಪರ ವಿಜಯಿಗಳಲ್ಲಿ ಸೇರಿಸಲಿ. ನಾಳೆ ನಾವು ಮರಣ ಹೊಂದಿದಾಗ ನಮ್ಮನ್ನು ಸ್ಮರಿಸುವ ಒಂದು ಬಳಗವನ್ನು ನಮಗೂ ನೀಡಲಿ.. ಆಮೀನ್.
✍️ ಇಮ್ರಾನ್ ರೆಂಜಲಾಡಿ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.