ಕೊಡಂಗಾಯಿ(ವಿಶ್ವಕನ್ನಡಿಗ ನ್ಯೂಸ್): 75ನೇ ಸ್ವಾತಂತ್ರ್ಯ ದಿನಾಚರಣೆ-ಅಮೃತ ಮಹೋತ್ಸವ ಕಾರ್ಯಕ್ರಮವು ಇಂದು ಬೆಳಿಗ್ಗೆ ಕೊಡಂಗಾಯಿ ಸುನ್ನೀ ಸೆಂಟರ್ ಮುಂಭಾಗದಲ್ಲಿ ನಡೆಯಿತು.
ಅಲ್ ಮದ್ರಸತುಲ್ ಖಿಲ್’ರಿಯ್ಯಾ ಕೊಡಂಗಾಯಿ ಮುಖ್ಯೋಪಾಧ್ಯಾಯರಾದ ಅಬ್ಬಾಸ್ ಮದನಿ ಉಸ್ತಾದರ ನೇತೃತ್ವದಲ್ಲಿ ಸುನ್ನೀ ಸೆಂಟರ್ ಪ್ರಧಾನ ಕಾರ್ಯದರ್ಶಿ CH ಮಹಮ್ಮದ್ ಮುಸ್ಲಿಯಾರ್ ಧ್ವಜಾರೋಹಣ ಮಾಡುವುದರೊಂದಿಗೆ ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮ ನಡೆಯಿತು.
ಈ ಸಂಭ್ರಮದಲ್ಲಿ ಮದ್ರಸ ಅಧ್ಯಾಪಕರಾದ ಮುಸ್ತಫ ಝುಹ್ರಿ ಉಸ್ತಾದ್ ಹಾಗೂ ಮದ್ರಸದ ವಿದ್ಯಾರ್ಥಿಗಳು ಸುನ್ನೀ ಸೆಂಟರ್ ಪದಾಧಿಕಾರಿಗಳ ಸಹಿತ ಹಲವಾರು ಸುನ್ನಿ ಸಂಘ ಕುಟುಂಬದ ಕಾರ್ಯಕರ್ತರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.