ಅಬುಧಾಬಿ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಕಲ್ಚರಲ್ ಫೌಂಡೇಶನ್ ಇದರ ಅಬುಧಾಬಿ ಸಮಿತಿಯ ಅಧೀನದಲ್ಲಿರುವ ಹಲವು ಸೆಕ್ಟರ್ ಗಳಲ್ಲಿ ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸಮಾರಂಭಗಳನ್ನು ಏರ್ಪಡಿಸಲಾಯಿತು.
ನಗರದ ಮದೀನಾ ಝಾಯಿದ್ ಬಳಿ ನಡೆದ ಸಮಾರಂಭದಲ್ಲಿ ಕೆಸಿಎಫ್ ಅಬುಧಾಬಿ ಸಮಿತಿಯ ಅಧ್ಯಕ್ಷ ಮೌಲಾನ ಹಸೈನಾರ್ ಅಮಾನಿ ಬಾಗವಹಿಸಿ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು. ಬಳಿಕ ಹರ್ ಘರ್ ತಿರಂಗ ಕಾರ್ಯಕ್ರಮದ ಅಂಗವಾಗಿ ತ್ರಿವರ್ಣ ಅನಾವರಣ ಮಾಡಲಾಯಿತು.
ನಗರದ ಇನ್ನೊಂದು ವಲಯವಾದ ಖಾಲಿದಿಯ್ಯ ಬಳಿ ನಡೆದ ಸಮಾರಂಭದಲ್ಲಿ ಕೆಸಿಎಫ್ ಅಬುಧಾಬಿ ಸಮಿತಿಯ ಪದಾಧಿಕರಿಗಳು ಹಾಗೂ ಕಾರ್ಯಕರ್ತರು ಸೇರಿ ಸಂಬ್ರಮಾಚರಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.