(www.vknews.in) : ಕೊಡಗು ಜಿಲ್ಲೆಯ ಕಾಕೋಟು ಪರಂಬುವಿನಲ್ಲಿ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಧರ್ಮಗುರುಗಳಾದ ಹಾರಿಸ್ ಮುಸ್ಲಿಯಾರ್ ರವರ ಕಾರನ್ನು ತಡೆದು ಅವರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿರುವುದು ಹಾಗೂ ಈ ಘಟನೆಯನ್ನು ನೋಡಿ ಭಯಭೀತರಾಗಿದ್ದ ಅವರ ಪತ್ನಿ ಮತ್ತು ಮಕ್ಕಳ ಮೇಲೆ ಹಲ್ಲೆಗೆ ಮುಂದಾಗಿರುವುದು ಖಂಡನೀಯ ಹಾಗೂ ಅಕ್ಷಮ್ಯ ಅಪರಾಧ. ಈ ದುಷ್ಕೃತ್ಯವನ್ನು ಎಸೆಗಿದ ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಡಗು ಜಿಲ್ಲಾ ಸಮಸ್ತ ಎಸ್ ವೈ ಎಸ್ ಜಿಲ್ಲಾ ಸಮಿತಿಯು ಅಗ್ರಹಿಸುತ್ತದೆ.
ಕೊಡಗು ಜಿಲ್ಲೆ ಶಾಂತಿ ಪ್ರೀತಿಗೆ ಹೆಸರಾದ ಜಿಲ್ಲೆ. ಎಲ್ಲಾ ಧರ್ಮಿಯರು ಸಹಬಾಳ್ವೆಯಿಂದ ಅನ್ಯೋನ್ಯತೆಯಿಂದ ಬದುಕುವ ಜಿಲ್ಲೆ. ಯಾವುದೇ ಭಯವಿಲ್ಲದೆ ಎಲ್ಲಾ ಸಮಯದಲ್ಲಿಯೂ ಇಲ್ಲಿ ಜನರು ಸಂಚರಿಸಲು ಅಡ್ಡಿ ಇಲ್ಲದ ಶಾಂತಿಯ ತವರೂರು. ಕೊಡಗಿನ ಜನರು ಶಾಂತಿ ಪ್ರಿಯರು ಹಾಗೂ ಸುಸಂಸ್ಕೃತರು ಮತ್ತು ವಿದ್ಯಾವಂತರು. ಇಂತಹ ಜಿಲ್ಲೆಗೆ ಕಪ್ಪು ಚುಕ್ಕಿಯನ್ನು ಹಾಗೂ ಕೆಟ್ಟ ಹೆಸರನ್ನು ತರಲು ಶ್ರಮಿಸುವಂತಹ ಕಿಡಿಕೇಡಿಗಳ ದುಷ್ಕೃತ್ಯಗಳನ್ನು ಜಿಲ್ಲೆಯ ಎಲ್ಲಾ ಜನಾಂಗದವರು ಒಗ್ಗಟ್ಟಾಗಿ ಎದುರಿಸಬೇಕೆಂದು ಎಸ್ ವೈ ಎಸ್ ಜಿಲ್ಲಾ ಸಮಿತಿಯು ಮನವಿ ಮಾಡುತ್ತಿದೆ.
ಇಂತಹ ಘಟನೆಗಳು ಮರುಕಳಿಸದ ಹಾಗೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಅಪರಾಧಿಗಳಿಗೆ ಸೂಕ್ತ ಶಿಕ್ಷೆ ನೀಡಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಧೆ ಕಾಪಾಡಬೇಕೆಂದು ಎಸ್, ವೈ, ಎಸ್, ಜಿಲ್ಲಾ ಅಧ್ಯಕ್ಷರಾದ ಬಶೀರ್ ಹಾಜಿ, ಪ್ರದಾನ ಕಾರ್ಯದರ್ಶಿ ಎಂ, ವೈ, ಅಶ್ರಫ್ ಫೈಝಿ, ಜಿಲ್ಲಾ ಕೋಶಾಧಿಕಾರಿ ವೈ, ಎಂ, ಉಮರ್ ಫೈಝಿ ಪ್ರಕಟಣೆಯಲ್ಲಿ ಮನವಿ ಮಾಡಿದ್ಧಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.