(www.vknews.in)ಮಂಗಳೂರು :ರಾಜ್ಯದಲ್ಲಿರುವ ಮದ್ರಸದ ನಿಯಂತ್ರಣಕ್ಕಾಗಿ “ಮದ್ರಸ ಮಂಡಳಿ” ರಚಿಸಲು ಸರ್ಕಾರ ಮುಂದಾಗಿರುವುದನ್ನು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ತೀವ್ರವಾಗಿ ಖಂಡಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷ ಕೆ ಎಂ ಫಯಾಝ್ ರವರು ಪತ್ರಿಕಾ ಹೇಳಿಕೆಯೊಂದನ್ನು ನೀಡಿ ಜನರ ಧಾರ್ಮಿಕ ವಿಶ್ವಾಸ ಮತ್ತು ಧಾರ್ಮಿಕ ಶಿಕ್ಷಣದಲ್ಲಿ ಹಸ್ತಕ್ಷೇಪ ಮಾಡುವುದು ಸರ್ಕಾರದ ಕೆಲಸವಲ್ಲ ಎಂದಿದ್ದಾರೆ. ಧಾರ್ಮಿಕ ಸ್ವಾತಂತ್ರ ಸಂವಿಧಾನದತ್ತ ಹಕ್ಕಾಗಿದ್ದು ಇದರಲ್ಲಿ ಸರಕಾರ ಮದ್ಯ ಪ್ರವೇಶಿಸಿದರೆ ಮುಸ್ಲಿಂ ಲೀಗ್ ಆ ಪ್ರಯತ್ನವನ್ನು ಯಾವುದೇ ಬೆಲೆ ತೆತ್ತಾದರೂ ಎದುರಿಸಲಿದೆ ಎಂದು ಕೆ ಎಂ ಫಯಾಝ್ ಹೇಳಿದರು. 2001 ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ರವರ ಸರಕಾರ ತರ ಬಯಸಿದ್ದ ಇಂತಹದೇ ಕಾನೂನನ್ನು ಅಂದಿನ ಮುಸ್ಲಿಂ ಲೀಗ್ ಅಧ್ಯಕ್ಷ ಗುಲಾಂ ಮಹಮೂದ್ ಬನಾತ್ ವಾಲ ಸಾಹೇಬ್ ನಾಯಕತ್ವದಲ್ಲಿ ಎದುರಿಸಿದ್ದ ಮುಸ್ಲಿಂ ಲೀಗ್ ಆ ಪ್ರಯತ್ನವನ್ನು ವಿಫಲಗೊಳಿಸಿದ್ದಾಗಿ ಅವರು ನೆನೆಪಿಸದರು. ಪ್ರವಾದಿ ಕಾಲದಿಂದ ಜಾರಿಯಲ್ಲಿರುವ ಮದ್ರಸ ಶಿಕ್ಷಣವೂ ದೇಶದ ಸ್ವಾತಂತ್ರ್ಯ ಹೋರಾಟದ ಮುಂಚೂಣಿ ಕೇಂದ್ರಗಳಾಗಿ ಕೂಡ ದೇಶ ಸೇವೆಯಲ್ಲಿ ತೊಡಗಿತು. ದೇಶ ಪ್ರೇಮವೂ ತಮ್ಮ ಧಾರ್ಮಿಕ ನಂಬಿಕೆಯ ಭಾಗವಾಗಿರುವ ಮುಸ್ಲಿಮರಿಗೆ ದೇಶ ಪ್ರೇಮದ ಪಾಠ ಮಾಡಲು ಇಂದು ಆಡಳಿತ ನಡೆಸುತ್ತಿರುವ ನಕಲಿ ದೇಶ ಪ್ರೇಮಿಗಳು ಮುಂದಾಗಿರುವುದು ಹಾಸ್ಯಾಸ್ಪದ ಎಂದು ಕೆ ಎಂ ಫಯಾಝ್ ಹೇಳಿದರು. ಸರ್ಕಾರಿ ಪ್ರಯೋಜಿತ ಮುಸ್ಲಿಮರನ್ನು ಶ್ರಿಷ್ಟಿಸಲು ಸಂಘ ಪರಿವಾರ ನಡೆಸಿತ್ತಿರುವ ಕುತಂತ್ರಗಳ ಬಗ್ಗೆ ಸಮುದಾಯ ವು ಒಗ್ಗಟ್ಟಾಗಿ ಜಾಗೃತರಾಗಬೇಕು ಎಂದು ಅವರು ಕರೆ ನೀಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.