(www.vknews.in) 185 ವರ್ಷ ಇತಿಹಾಸದ ಉಪ್ಪಿನಂಗಡಿ ಮಾದರಿ ಶಾಲೆಯ ಪೋಷಕರು ತಮ್ಮ ಮಕ್ಕಳ ಆರೋಗ್ಯದ ಕಾಳಜಿಯಿಂದ ಇದೆ ಬರುವ ಸೆಪ್ಟಂಬರ್ 1 ತಾರೀಕಿಗೆ ಉಪ್ಪಿನಂಗಡಿ ಪಂಚಾಯತ್ ಮುಂಬಾಗ ಪ್ರತಿಭಟನೆ ಮಾಡುವ ಬಗ್ಗೆ ಇಲಾಖೆಗಳಿಗೆ ಮನವಿಯನ್ನು ಸಲ್ಲಿಸುತ್ತಾ ಇದ್ದು ಅದು ವೈರಲ್ ಆಗುತ್ತಿದ್ದರೂ ಇನ್ನೂ ಸ್ಥಳೀಯ ಸರಕಾರ ನಿಷ್ಕ್ರಿಯ ವಾಗಿದೆ ಈ ವಿಷಯಕ್ಕೆ ಸಂಬಂಧಿಸಿ ಮಾದರಿಶಾಲೆ ಉಪ್ಪಿನಂಗಡಿಯ ಎಸ್ಡಿಎಂಸಿ ಯು ಹಲವು ಬಾರಿ ಮೌಖಿಕ ಹಾಗೂ ಲಿಖಿತ ಮನವಿಯನ್ನು ಸಲ್ಲಿಸಿದ್ದರು ಕೂಡ ಪಂಚಾಯತ್ ನಿಂದ ಯಾವುದೇ ರೀತಿಯ ಪ್ರತಿಕ್ರಿಯೆಗಳು ಬಂದಿರಲಿಲ್ಲ, ಆದುದರಿಂದ 23/08/2022 ರಂದು ಪಂಚಾಯತ್ ನಲ್ಲಿ ನಡೆದ ಸಾಮಾನ್ಯ ಸಭೆಗೆ ಎಸ್ಡಿಎಂಸಿ ಸದಸ್ಯರು ಮನವಿಯನ್ನು ಕೊಟ್ಟು ಒಂದು ವಾರದ ಗಡುವನ್ನು ಕೊಟ್ಟ ಕಾರಣ ,ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿ ಒಂದು ವಾರದೊಳಗೆ ಪರಿಹಾರ ಕಾಣುವ ಬಗ್ಗೆ ನಿರ್ಣಯವನ್ನು ಕೈ ಗೊಂಡಿದ್ದರು.
ಆದರೆ ಈ ದಿನದ ವರೆಗೂ ಯಾವುದೇ ರೀತಿಯ ಪರಿಹಾರ ಕಾಣದೆ ಮಕ್ಕಳು ಮತ್ತು ಸಾರ್ವಜನಿಕರು ದುರ್ನಾತ ವನ್ನು ಸಹಿಸಿ ಕೊಂಡಿರಬೇಕಾದ ಅವಸ್ಥೆಯನ್ನು ಉಪ್ಪಿನಂಗಡಿ ಪಂಚಾಯತ್ ಕೈ ಗೊಂಡಿದೆ.
ಸ್ವಚ್ಚ ಭಾರತ ಎನ್ನುವ ಸ್ಲೋಗನ್ ನೊಂದಿಗೆ ಮನೆ ಮನೆಗೆ ತೆರಳುವ ಆಶಾ ಕಾರ್ಯಕರ್ತೆಯರು ಕೂಡ ಇದರ ಬಗ್ಗೆ ಮೌನ ವಾಗಿರುವುದನ್ನು ಕಾಣುತ್ತಿರುವುದು ತುಂಬಾ ಖೇದಕರ ವಿಷಯವಾಗಿದೆ.
ಊರಿನ ಮನೆಗಳಲ್ಲಿ ಎಲ್ಲಾದರೂ ಸ್ವಲ್ಪ ಕೊಳಚೆ ಇದ್ದರೆ ಕೂಡಲೇ ಅಲ್ಲಿ ಪೈಪ್ ಹಾಕಲು ಅಥವಾ ಇಂಗು ಗುಂಡಿ ಮಾಡಲು ಸತಾಯಿಸುವ ಪಂಚಾಯತ್, ರಾಜಾರೋಷವಾಗಿ 120 ಕ್ಕಿಂತಲೂ ಹೆಚ್ಚು ಮಕ್ಕಳಿಗೆ ಹಾಗೂ ಹತ್ತಿರ ವಾಸ ಮಾಡುತ್ತಿರುವ ಮನೆಯವರಿಗೆ ಸಾಂಕ್ರಾಮಿಕ ರೋಗ ಹರಡಲು ಕಾರಣ ಆಗಬಹುದಾದ ರೀತಿಯಲ್ಲಿ ಹತ್ತಿರದ ವಸತಿ ಸಮುಚ್ಚಯವು ತೆರೆದ ಚರಂಡಿ ಮಾಡಿ ಕೊಳಚೆ ನೀರನ್ನು ಬಿಡುತ್ತಿರುವ ಬಗ್ಗೆ ಮೌನ ವಹಿಸಿರುವುದು ಹಲವು ತರಹದ ಗುಮಾನಿಯನ್ನು ಉಂಟು ಮಾಡುತ್ತದೆ
ಇದರ ಬಗ್ಗೆ ಈಗಾಗಲೇ ಶಿಕ್ಷಣ ಪ್ರೇಮಿಗಳಾದ ನಾಗರಿಕರು ಕೂಡ ಶಾಲಾ ಪೋಷಕರಿಗೆ ಬೆಂಬಲವನ್ನು ಸೂಚಿಸಿದ್ದು ಒಂದು ತಾರಿಕಿನಂದು ಬ್ರಹತ್ ಪ್ರತಿಭಟನೆಯ ಮೂಲಕ,ಅನಾಸ್ತೆ ತೋರಿಸುತ್ತಾ ಇರುವ ಪಂಚಾಯತ್ ಆಡಳಿತವನ್ನು ಎಚ್ಚರಿಸುವ ಪ್ರಯತ್ನ,ಹಾಗೂ ಮಕ್ಕಳಿಗೆ ಸ್ವಾಸ್ತ್ಯ ವಾಗಿ ತರಗತಿಗೆ ಬರಲು ಅವಕಾಶವನ್ನು ಮಾಡಿ ಕೊಟ್ಟು ಮಕ್ಕಳ ಹಕ್ಕುಗಳ ಉಲ್ಲಂಘನೆಗೆ ಪರಿಹಾರವನ್ನು ಕಾಣಲಿದ್ದೇವೆ.
ಮೊಯ್ದಿನ್ ಕುಟ್ಟಿ
ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ವೇದಿಕೆ
7090004020
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.