(www.vknews.in) ಉಪ್ಪಿನಂಗಡಿ ಮಾದರಿ ಶಾಲೆಯ ಎಲ್ ಕೆ ಜಿ – ಯು ಕೆ ಜಿ ತರಗತಿ ಮತ್ತು ಅಂಗನವಾಡಿಯ ಬಳಿ ಸ್ಥಳೀಯ ವಸತಿ ಗೃಹ ದಿಂದ ಕೊಳಚೆ ನೀರನ್ನು ನೇರವಾಗಿ ತೆರೆದ ಚರಂಡಿಗೆ ಬಿಡುತ್ತಿದ್ದು ಮಕ್ಕಳ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿತ್ತು.
ಇದರ ಬಗ್ಗೆ ಶಾಲೆಯ ಎಸ್ಡಿಎಂಸಿ ಹಲವು ಬಾರಿ ಸ್ಥಳೀಯ ಪಂಚಾಯತ್ ಗೆ ಮನವಿ ಮತ್ತು ಮೌಖಿಕ ದೂರನ್ನು ಸಲ್ಲಿಸುತ್ತಾ ಬಂದಿದ್ದು ಯಾವುದೇ ರೀತಿಯ ಸ್ಪಂದನೆ ಕಂಡು ಬಂದಿರಲಿಲ್ಲ. ಇದನ್ನು ಮನಗಂಡ ಶಾಲೆಯ ಮಕ್ಕಳ ಪೋಷಕರು ಮತ್ತು ಎಸ್ಡಿಎಂಸಿ ಸದಸ್ಯರ ನಿಯೋಗವು 23/08/2022 ರಂದು ಪಂಚಾಯತ್ ನಲ್ಲಿ ನಡೆಯುತ್ತಿದ್ದ ಸಾಮಾನ್ಯ ಸಭೆಗೆ ದೂರನ್ನು ಸಲ್ಲಿಸಿ, ಒಂದು ವಾರದ ಒಳಗೆ ಈ ಸಮಸ್ಯೆಗೆ ಪರಿಹಾರ ದೊರಕದೆ ಇದ್ದರೆ ಪ್ರತಿಭಟನೆ ಮಾಡುವ ಬಗ್ಗೆ ಮುನ್ನೆಚ್ಚರಿಕೆಯನ್ನು ಕೂಡ ನೀಡಲಾಗಿತ್ತು.
ಆದರೆ ಈ ಮುನ್ನೆಚ್ಚರಿಕೆ ದೂರು ಕೊಟ್ಟು ಕೂಡ ಯಾವುದೇ ರೀತಿಯ ಬದಲಾವಣೆ ಕಾಣದೆ ಕೊಳಚೆ ನೀರು ತೆರೆದ ಚರಂಡಿಯಲ್ಲಿ ರಾಜಾ ರೋಷವಾಗಿ ಸಾರ್ವಜನಿಕರ ಹಾಗೂ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತ ಹರಿಯುತ್ತಲೇ ಇತ್ತು.
ಇದನ್ನು ಮನಗಂಡ ಪೋಷಕರ ನಿಯೋಗ 30 ತಾರಿಕಿನಂದು ಪ್ರತಿಭಟನೆಯ ದಿನಾಂಕ ನಿಗದಿ ಪಡಿಸಿ ಪತ್ರವನ್ನು ಸ್ಥಳೀಯ ಪಂಚಾಯತ್, ಆರಕ್ಷಕ ಠಾಣೆ, ಮತ್ತು ಅದರ ಪ್ರತಿಯನ್ನು ಸ್ಥಳೀಯ ಪತ್ರಿಕಾ ಪ್ರತಿನಿಧಿಗಳಿಗೆ ,ಶಿಕ್ಷಣ ಸಚಿವರಿಗೆ, ಜಿಲ್ಲಾ ಕಾರ್ಯ ನಿರ್ವಹಣಾಧಿಕಾರಿಗಳಿಗೆ,ಜಿಲ್ಲಾಧಿಕಾರಿಗಳಿಗೆ,ಮಕ್ಕಳ ಹಕ್ಕುಗಳ ಆಯೋಗಕ್ಕೆ, ಮಕ್ಕಳ ಕಲ್ಯಾಣ ಇಲಾಖೆಗೆ ಇಮೇಲ್ ಮುಖಾಂತರ ಕಳುಹಿಸಿ ಕೊಡಲಾಗಿತ್ತು.
ಇಷ್ಟೆಲ್ಲಾ ಪ್ರಚಾರವನ್ನು ನೀಡಿ ದೂರನ್ನು ಸಲ್ಲಿಸಿ ಕೂಡ ಪ್ರತಿಭಟನೆ ಮಾಡಲು ನಿಶ್ಚಯಿಸಿದ ಪೋಷಕರಲ್ಲಿ ಸ್ಥಳೀಯ ಪಂಚಾಯತ್ ಯಾವುದೇ ರೀತಿಯ ಮಾತುಕತೆ ಮಾಡದೆ ಇದ್ದುದರಿಂದ ಅನಿವಾರ್ಯ ವಾಗಿ 1 ತಾರೀಕಿಗೆ ಉಪ್ಪಿನಂಗಡಿಯ ಶಿಕ್ಷಣ ಪ್ರೇಮಿಗಳು, ಪೋಷಕರು, ಮತ್ತು ಮಕ್ಕಳೊಂದಿಗೆ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆಯನ್ನು ಮಾಡಲಾಯಿತು . ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ಪೋಷಕರು ಮತ್ತು ಶಿಕ್ಷಣ ಪ್ರೇಮಿಗಳ ನಿಯೋಗದೊಂದಿಗೆ ಸ್ಥಳೀಯ ಪಂಚಾಯತ್ ಅಧ್ಯಕ್ಷೆ ಉಷಾ ಮುಳಿಯ,ಪಂಚಾಯತ್ ಸದಸ್ಯ ಸುರೇಶ್ ಅತ್ರಮಜಲು, ಧನಂಜಯ ನಟ್ಟಿಬೈಲು ಹಾಗೂ ಸ್ಥಳೀಯ ಜನ ಪ್ರತಿನಿಧಿ ಯು ಟಿ ತೌಸೀಫ್ ರವರು ಮಾತನಾಡಿ, ಕೂಡಲೇ ಚರಂಡಿಯನ್ನು ಸ್ವಚ್ಛತೆ ಗೊಳಿಸಿ ಕೊಳಚೆ ನೀರು ನಿಲ್ಲದಂತೆ ವ್ಯವಸ್ಥೆ ಮಾಡಿ ಕೊಡಲಾಗುವುದು ಹಾಗೂ ಹದಿನೈದು ದಿನದೊಳಗೆ ಶಾಶ್ವತ ಪರಿಹಾರವನ್ನು ಮಾಡಿ ಕೊಡಲಾಗುವುದು ಎನ್ನುವ ಭರವಸೆಯನ್ನು ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂತೆಗೆಯಲಾಯಿತು. ಈ ಪ್ರತಿಭಟನೆಯಲ್ಲಿ ಮಾದರಿ ಶಾಲೆಯಲ್ಲಿ ನಡೆಸಿದ ಮೈಸೂರು ವಲಯ ಮಟ್ಟದ ಯೋಗಾಸನ ಸ್ಪರ್ಧೆಯ ಸಂಚಲನ ಸಮಿತಿಯ ಅಧ್ಯಕ್ಷರಾಗಿದ್ದ ,ಮತ್ತು ಶಾಲಾ ದಾನಿಗಳು ಆಗಿರುವ ,ಖ್ಯಾತ ದಂತ ವೈದ್ಯ ಡಾ. ರಾಜಾರಾಮ್ ಕೆ. ರೂಪೇಶ್ ಅಲಿಮಾರ್,ಎಂ ಬಿ ನಝೀರ್ ಮಠ,ವೆಂಕಪ್ಪ ಪೂಜಾರಿ, ಖಾಮಿಲ್ ಶುಕ್ರಿಯ ಹಿರಿಯ ವಿದ್ಯಾರ್ಥಿ ಸಂಘದ ಅಬ್ದುಲ್ ರಹಿಮಾನ್ ಯುನೀಕ್,ಉಮೇಶ್ ಅಮೀನ್,ಖಲಂದರ್ ಶಾಫಿ,ಅಬ್ದುಲ್ ಲತೀಫ್ ಕೆ ಎಚ್. ಅಬ್ದುಲ್ ಮಜೀದ್ ಸಫಾರಿ, ಶಾಲಾ ಪೋಷಕರು ಮತ್ತು ಎಸ್ಡಿಎಂಸಿ ಅಧ್ಯಕ್ಷರಾದ ರವಿ ಚಂದ್ರ ಶಾಂತಿ, ಸದಸ್ಯರಾದ ಅಬ್ದುಲ್ ಮಜೀದ್, ಫಯಾಜ್ ನೆಕ್ಕಿಲಾಡಿ,ಫಾರೂಕ್ ಜಿಂದಗಿ,ಹರೀಶ್,ಮೊಯಿದಿನ್ ಕುಟ್ಟಿ ಹಾಗೂ ಎಲ್ ಕೆ ಜಿ ಮತ್ತು ಯು ಕೆ ಜಿ ಯ ಪೋಷಕ ಪ್ರತಿನಿಧಿಗಳಾದ ಪ್ರಶಾಂತ್, ಮೊಯ್ದೀನ್,ಇಬ್ರಾಹಿಂ ,ಶರತ್ ಕುಮಾರ್,ಲಕ್ಷ್ಮಣ ಗೌಡ,ಮೀನಾಕ್ಷಿ, ಪ್ರತೀಕ,ಜಯಂತಿ,ರಮ್ಯ,ನುಸೃತ್,ಬೀಪಾತುಮ್ಮ್ಮ,ಆಯಿಷಾ,ಅಕ್ಷಿತ, ಅಪ್ಸ, ವಸಂತ,ಉಮೇಶ್ ,ತಾರಾನಾಥ್, ಶುಭ,ಲೋಲಾಕ್ಷಿ ಹಾಗೂ ಪೋಷಕರು ಮತ್ತು ಮಕ್ಕಳು ಭಾಗವಹಿಸಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.