(www.vknews.in) ಕಡಬ. ಹಯಾತುಲ್ ಇಸ್ಲಾಂ ಮದರಸ ಕುದ್ಲೂರುಇದರ ವತಿಯಿಂದ ಮುಅಲ್ಲಿಂ ಡೇ ಆಚರಿಸಲಾಯಿತು. ಉಸ್ತಾದರ ದುವಾಃ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಮದರಸ ವಿದ್ಯಾರ್ಥಿ ಅಸ್ಲಂ ಕಿರಾಅತ್ ಓದಿದರು. ಮದರಸದ ಹಿರಿಯ ವಿದ್ಯಾರ್ಥಿ ಸಿಯಾನ್ ಸ್ವಾಗತಿಸಿದರು. ಸಹಧ್ಯಾಪಕರಾದ ಅಬ್ದುಲ್ ಹಮೀದ್ ಮುಸ್ಲಿಯಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಮಾತ್ ಖತೀಬರಾದ ಖಲಂದರ್ ಶಾಫೀ ಮದನಿ ಪ್ರಾಸ್ತಾವಿಕ ಭಾಷಣ ನಡೆಸಿ ವಿದ್ಯಾಭ್ಯಾಸ ಹಾಗೂ ಉಸ್ತಾದರ ಮಹತ್ವದ ಬಗ್ಗೆ ವಿವರಿಸಿದರು. ಜಮಾಅತ್ ಅಧ್ಯಕ್ಷರಾದ ಕೆ ವೈ ಇಸ್ಮಾಯಿಲ್ ಪ್ರಸ್ತಾವಿಕ ಭಾಷಣ ಮಾಡಿದರು. ಎಸ್ ಕೆ ಎಸ್ಎಸ್ ಎಫ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಗೂ ಜಮಾತ್ ಖಜಾಂಚಿ ಅಬ್ದುಲ್ ಖಾದರ್ ಹಾಗೂ
ಹಿರಿಯ ವ್ಯಕ್ತಿ ಅಹಮದ್ ಹಾಜಿ ಹಾಗೂ ಎಸ್ ಕೆ ಎಸ್ ಎಸ್ ಎಫ್ ಕ್ಲಸ್ಟರ್ ಅಧ್ಯಕ್ಷರಾದ ಅಶ್ರಫ್ ಕೊರೆಪದವು ಹಾಗೂ ಮಕ್ಕಳ ಪೋಷಕರು ಹಿರಿಯ ವ್ಯಕ್ತಿಗಳು ಹಾಗೂ ಹಳೆ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.