ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ. ಅ ) ರವರ 1497 ನೇ ಜನ್ಮದಿನಾಚರಣೆ ಪ್ರಯುಕ್ತ ಮದರಸ ವಿದ್ಯಾರ್ಥಿಗಳ, ಹಳೆ ವಿದ್ಯಾರ್ಥಿಗಳ, ದರ್ಸ್ ಮುತಅಲ್ಲಿಮ್ ಕಲಾ ಸಾಹಿತ್ಯ ಸಂಭ್ರಮ ವಿದ್ಯಾರ್ಥಿ ಫೆಸ್ಟ್”ಕನ್ಸೋಲಿಯಂ” ಗೆ ಗಾಂಧಿನಗರ ಮದ್ರಸ ಅಂಗಣದಲ್ಲಿ ಚಾಲನೆ ನೀಡಲಾಯಿತು.
ಸಮಾರಂಭದ ಅಧ್ಯಕ್ಷತೆ ಯನ್ನು ಜುಮಾ ಮಸ್ಜಿದ್ ಅಧ್ಯಕ್ಷರಾದ ಕೆ ಎಂ ಮುಸ್ತಫ ವಹಿಸಿದ್ದರು ಮುದರ್ರಿಸ್ ಶರಫುದ್ದೀನ್ ಸಅದಿ ಉದ್ಘಾಟಿಸಿದರು, ಝೆಯಿ ನುಲ್ ಆಬಿದೀನ್ ತಂಗಲ್ ಜಯನಗರ ದುವಾ ಪ್ರಾರ್ಥನೆ ನೆರವೇರಿಸಿದರು. ಜಮಾಅತ್ ಕಾರ್ಯದರ್ಶಿ ಅಬ್ದುಲ್ ಮಜೀದ್, ಮದರಸ ಉಸ್ತುವಾರಿ ಹಮೀದ್ ಬೀಜಕೊಚ್ಚಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಜಮಾಅತ್ ನಿರ್ದೇಶಕರು ಗಳಾದ ಹಮೀದ್ ಎಸ್ ಎಂ, ಇಬ್ರಾಹಿಂ ಶಿಲ್ಪಾ, ಕೋಶಾಧಿಕಾರಿ ಮೊಯಿದೀನ್ ಫ್ಯಾನ್ಸಿ, ತೀಪುಗಾರರಾದ ಸಅದ್ ಕ ರ್ನೂರ್, ಅಶ್ರಫ್ ಸಖಾಫಿ, ಮೊದಲಾದವರು ಉಪಸ್ಥಿತರಿದ್ದರು. ಸದರ್ ಉಸ್ತಾದ್ ಇಬ್ರಾಹಿಂ ಸಖಾಫಿ ಪುಂಡೂರ್ ಸ್ವಾಗತಿಸಿ ಲತೀಫ್ ಸಖಾಫಿ ವಂದಿಸಿದರು. 2 ದಿನ ನಿರಂತರ ವಾಗಿ ನಡೆಯಲಿರುವ ಈ ಕಾರ್ಯಕ್ರಮ ದಲ್ಲಿ 3 ತಂಡ ಗಳಲ್ಲಿ ಕನ್ನಡ ಭಾಷಣ, ಮಲೆಯಾಳ ಭಾಷಣ, ಉರ್ದು, ಅರೇಬಿಕ್, ನಲ್ಲಿ ವಿವಿಧ ಸ್ಪರ್ಧೆಗಳು ಮೂಡಿ ಬರಲಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.