(www.vknews.in) : ನ್ಯಾಯವು ಮರೀಚಿಕೆಯಾಗಿ ಅನ್ಯಾಯವು ತಾಂಡವಾಡುತ್ತಿದೆ, ಬಿಡಿ ಕಾಸಿಗೆ ಬೇಕಾಗಿ ಕೆಲವು ಭಿಕ್ಷುಕರು RSS ಗೇ ಸಮುದಾಯದ ವಿಷಯಗಳನ್ನು ಬಿತ್ತರಿಸುತ್ತಿದ್ದಾರೆ. ಎತ್ತ ಕಡೆಗೆ ಸಾಗುತ್ತಿದೆ ಮುಸ್ಲಿಂ ಸಮುದಾಯ, ಏಕ ಮುಖವಾಗಿ ಸಾಗುತ್ತಿದೆ, ನ್ಯಾಯವು ಅನ್ಯಾಯ ವ್ಯಸಗಿದ ವ್ಯಕ್ತಿಯಲ್ಲಿ ಜಾತಿ ಹುಡುಕುವ ಮಾಧ್ಯಮದವರಿಗೆ ದುಡಿದ ಸಂಪಾದಿಸಲು ಅನರ್ಹರಾದ ವ್ಯಕ್ತಿಗಳು.
ಮುಸ್ಲಿಂ ಸಂಘಟನೆಯ ವಿಷಯ ಗಳನ್ನು ಮಾಧ್ಯಮದವರಿಗೆ ರವಾನಿಸುತ್ತಿದ್ದಾರೆ, ದುರಂತವಲ್ಲದೇ ಇನ್ನೇನನ್ನಲ್ಲಿ..?, ಅನ್ಯಾಯದ ವಿರುದ್ಧ ಮಾತನಾಡುವವನನ್ನು ಜೈಲಿನಲ್ಲಿ ಕೂರಿಸುವ ತಂತ್ರವು ಸ್ವಂತ ಸಮುದಾಯದ ಜನರೇ ನಡೆಸುವಾಗ ಸತ್ಯಕ್ಕೆ ಬೆಲೆ ಇಲ್ಲವೇ ಎಂಬುವುದು ಅರಿವಾಗುತ್ತಿಲ್ಲ, ಯಾಕೆ ಇಷ್ಟು ನೀಚ ವರ್ಗಕ್ಕೆ ನಮ್ಮವರು ತಲುಪಿರುವುದು ಎಂಬುವುದು ಅರಿವಾಗುತ್ತಿಲ್ಲ.
ನಮಗೆ ಹಲವು ಪಕ್ಷಗಳಿರಬಹುದು. ಆದರೆ ಸಮುದಾಯಕ್ಕೆ ಅನ್ಯಾಯವಾದಗ ಒಂದಾಗಿ, ಬರಿ ಶುಕ್ರವಾರದ ನಮಾಜಿನಲ್ಲಿ ಒಂದಾದರೇ ಸಾಕೇ..?, ಉಮ್ಮತಿಗಾಗಿ ಕಣ್ಣೀರು ಹಾಕಿದ ಪ್ರವಾದಿ ﷺ ರ ಇಂದಿನ ಉಮ್ಮತಿಗಳ ವರ್ತನೆ ಯಾವ ರೀತಿ ಇದೆ ಎಂಬುವುದು ಸಹ ಊಹಿಸಲು ಸಹ ಅಸಾಧ್ಯವಲ್ಲವೇ..?, ಧರ್ಮ ರಕ್ಷಣೆ ಮಾಡಬೇಕಾದ ಕೆಲವರು ತಮ್ಮ ಧರ್ಮವನ್ನು ಬಿಡಿ ಕಾಸಿಗೆ ಬೇಕಾಗಿ ಹರಾಜು ಮಾಡುತ್ತಿರುವುದು ದುಃಖಕರವಾದ ಸಂಗತಿ.
ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಸ್ವಂತ ಸಮುದಾಯದ ಜನರನ್ನೇ ತೇಜೋವಧೆ ಮಾಡಿ ಸಂತೋಷ ಪಡುವ ನಾಚಿಕೆ ಮಾನ ಮರ್ಯಾದೆಯನ್ನು ಬಿಡಿ ಕಾಸಿಗೆ ಮಾರಿದ ಜನರು ಒಂದು ಕಡೆ, ಆದರೆ ತನ್ನ ಸಮುದಾಯದ ನಿಯಮವನ್ನು ಮರೆಮಾಚಿ ಮತ ಪಡೆಯಲು ಅನಾಚಾರ ಮಾಡುವ ಜನರು ಮತ್ತೊಂದು ಕಡೆ, ಆದರೆ ಸತ್ಯವನ್ನು ಬಿತ್ತರಿಸುವ ಜನರನ್ನು ಜೈಲಿಗಟ್ಟಿಸುವ ಜನರು ಇನ್ನೊಂದು ಕಡೆ ಅಲ್ಲವೇ..?, ಪ್ರತಿಯೊಂದು ಕಾರ್ಯದಲ್ಲಿ ತಪ್ಪನ್ನು ಹುಡುಕುವ ಜನರ ಅದನ್ನು ತೆಗೆದು ಹಲವು ಅಡಿ ಬರಹವನ್ನು ಹಾಕಿ ಸೋಶಿಯಲ್ ಮೀಡಿಯಾದಲ್ಲಿ ರವಾನಿಸುವವರು ಸಹ ಇಂದಿನ ಕಾಲಘಟ್ಟದಲ್ಲಿ ಮುಂಚೂಣಿಯಲ್ಲಿರುವುದು ಖೇದಕರವಾದ ಸಂಗತಿ..
ದಯವಿಟ್ಟು ಸಮುದಾಯದ ಏಳಿಗೇಗಾಗಿ ಒಂದಾಗಿ, ಇಂದು ಹಲವು ಕುಟುಂಬಗಳು ಬೀದಿಯಲ್ಲಿದೆ ಎಂಬುವುದು ಮರೆಯದಿರಿ, ಅವರಿಗೆ ನ್ಯಾಯ ಒದಗಿಸಿಕೊಳ್ಳುವವರು ಯಾರು…? ಎಂಬುವುದು ಉತ್ತರವಿಲ್ಲದೆ ಮೌನಿಯಾಗಿ ಹೋಗಿದೆ…
✍️ ಅನೀಸ್ ಕುಕ್ಕಾಜೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.