ಯುಎಇ(ವಿಶ್ವಕನ್ನಡಿಗ ನ್ಯೂಸ್): ಉತ್ತರ ಕರ್ನಾಟಕದಲ್ಲಿ ಗಮನಾರ್ಹ ಕಾರ್ಯಾಚರಣೆಯನ್ನು ಮಾಡುತ್ತಿರುವ ಮಸ್ದರ್ ಎಜ್ಯು ಆಂಡ್ ಚಾರಿಟಿ ಇದರ ಯುಎಇ ಸಮಿತಿಯನ್ನು ಸಂಸ್ಥೆಯ ಜನರಲ್ ಮ್ಯಾನೇಜರ್ ಸಯ್ಯಿದ್ ಯೂಸುಫ್ ನವಾಝ್ ಅಲ್ ಹುಸೈನಿ ರವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ತರಲಾಯಿತು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಫಿಝ್ ಸುಫ್ಯಾನ್ ಸಖಾಫಿ ವಿಷಯ ಮಂಡನೆ ಮಾಡಿ ಯುಎಇ ಪರ್ಯಟನೆಯನ್ನು ಐತಿಹಾಸಿಕ ಗೊಳಿಸಿದ ಎಲ್ಲಾ ಎಮಿರೇಟ್ಸ್ಗಳ ನಾಯಕರಿಗೆ ಕೃತಜ್ಞತೆ ಸಲ್ಲಿಸಿದರು.
ನಿರ್ದೇಶಕ ಮಂಡಳಿ ಸದಸ್ಯರಾಗಿ ಅಬ್ದುಲ್ ಹಮೀದ್ ಸಅದಿ, ಇಬ್ರಾಹಿಂ ಸಖಾಫಿ ಕೆದುಂಬಾಡಿ, ಅಬ್ದುಲ್ ಜಲೀಲ್ ನಿಝಾಮಿ, ಮೂಸಾ ಹಾಜಿ ಬಸರಾ, ಇಕ್ಬಾಲ್ ಸಿದ್ಧಕಟ್ಟೆ, ಅಬ್ದುಲ್ ರಝಾಕ್ ಹಾಜಿ ಜಲ್ಲಿ, ಇಬ್ರಾಹಿಂ ಬ್ರೈಟ್ ಮಾರ್ಬಲ್, ನಝೀರ್ ಹಾಜಿ ಕೆಮ್ಮಾರ, ಹಸನ್ ಕಂಬಳಬೆಟ್ಟು, ಅಶ್ರಫ್ ಹಾಜಿ ಅಡ್ಯಾರ್, ಹನೀಫ್ ಉಸ್ತಾದ್ ರಾಸಲ್ಖೈಮ ಹಾಗೂ ಜನಾಬ್ ಇಕ್ಬಾಲ್ ಕುಂದಾಪುರ ರವರನ್ನು ಆಯ್ಕೆ ಮಾಡಲಾಯಿತು.
ರಾಷ್ಟ್ರೀಯ ಸಮಿತಿ ಅಧ್ಯಕ್ಷರಾಗಿ ನಲ್ಖಾ ಅಬ್ದುಲ್ಲಾ ಹಾಜಿ ಶಾರ್ಜಾ, ಪ್ರಧಾನ ಕಾರ್ಯದರ್ಶಿಯಾಗಿ ಜನಾಬ್ ರಜಬ್ ಉಚ್ಚಿಲ, ಕೋಶಾಧಿಕಾರಿಯಾಗಿ ಕೆ.ಎಚ್ ಮುಹಮ್ಮದ್ ಸಖಾಫಿ ಅಬುಧಾಬಿ ರವರನ್ನು ಆಯ್ಕೆ ಮಾಡಲಾಯಿತು. ಅಬ್ದುಲ್ ಕರೀಂ ಮುಸ್ಲಿಯಾರ್ ಶಾರ್ಜಾ, ಹಸೈನಾರ್ ಅಮಾನಿ ಅಬುಧಾಬಿ, ಬರ್ಶಾ ಮದನಿ, ಮುಹಮ್ಮದ್ ಹೆಜಮಾಡಿ ರಾಸಲ್ಖೈಮಾ, ಅಬ್ದುಲ್ ಖಾದರ್ ಸಾಲೆತ್ತೂರು, ಅಬ್ದುಲ್ ರಹೀಂ ಕೋಡಿ ಇವರನ್ನು ಉಪಾಧ್ಯಕ್ಷರನ್ನಾಗಿಯೂ ಮನ್ಸೂರ್ ಹರೇಕಳ, ಹಕೀಂ ತುರ್ಕಳಿಕೆ ಅಬುಧಾಬಿ, ಅಫ್ಸಲ್ ರಾಸಲ್ಖೈಮ, ಅಬ್ದುಲ್ ಖಾದರ್ ಅಜ್ಮಾನ್, ಅಬ್ದುಲ್ ರಹೀಂ ಅಲ್ ಐನ್, ಅಬ್ದುಲ್ ಅಝೀಝ್ ಅಹ್ಸನಿ ದುಬೈ ಇವರನ್ನು ಕಾರ್ಯದರ್ಶಿಗಳನ್ನಾಗಿಯೂ ಆಯ್ಕೆ ಮಾಡಲಾಯಿತು.
ಪ್ರತೀ ಎಮಿರೇಟ್ಸ್ಗಳಿಂದ ಕೋಡಿನೇಟರ್ಸ್ಗಳಾಗಿ ಅಹ್ಮದ್ ಕಬೀರ್ ಅಬುಧಾಬಿ, ಆಸಿಫ್ ಇಂದ್ರಾಜೆ, ಮುಸ್ತಫಾ ಮಾಸ್ಟರ್ ದುಬೈ, ಅಮಾನಿ ಅಜ್ಮಾನ್, ಅಬ್ದುಲ್ ಸಲಾಂ ಕಕ್ಕಿಂಜೆ, ಹಾಫಿಲ್ ಸಫ್ವಾನ್ ಅಲ್ ಐನ್, ತಾಜುದ್ದೀನ್ ಅಮ್ಮುಂಜೆ ಶಾರ್ಜಾ, ನವಾಝ್ ಹಾಜಿ ರವರನ್ನು ಆಯ್ಕೆ ಮಾಡಲಾಯಿತು. ಫೀಲ್ಡ್ ಎಕ್ಸಿಕ್ಯೂಟಿವ್ ಆಗಿ ಅಬ್ದುಲ್ ರಶೀದ್ ಮದನಿ ರವರನ್ನು ಹಾಗೂ 17 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.