(ವಿಶ್ವ ಕನ್ನಡಿಗ ನ್ಯೂಸ್) : ನಾಲ್ಕು ವರ್ಷಗಳ ನಂತರ ಬಾಲಿವುಡ್ ನಟ ಶಾರುಖ್ ಖಾನ್ ಅವರ ಕಮ್ ಬ್ಯಾಕ್ ಚಿತ್ರ ಪಠಾಣ್. ಚಿತ್ರದಲ್ಲಿ ದೀಪಿಕಾ ಪಡುಕೋಣೆ ಜತೆಗಿನ ಬೇಷರಂ ರಂಗ್ ಹಾಡು ವಿವಾದಕ್ಕೆ ಸಿಲುಕಿತ್ತು. ದೀಪಿಕಾ ಪಡುಕೋಣೆ ಅವರ ಉಡುಗೆ ವಿವಾದಕ್ಕೆ ಕಾರಣವಾಗಿತ್ತು.
ಈ ವಿಚಾರವಾಗಿ ನಟ ಪ್ರಕಾಶ್ ರಾಜ್ ಚಿತ್ರದ ಬೆಂಬಲಕ್ಕೆ ನಿಂತಿದ್ದಾರೆ. ಕುಂಕುಮ ಹಚ್ಚಿ ಮಕ್ಕಳಿಗೆ ಕಿರುಕುಳ ನೀಡುವುದು ತಪ್ಪಲ್ಲ, ಚಿತ್ರದಲ್ಲಿನ ಡ್ರೆಸ್ಸಿಂಗ್ ಸಮಸ್ಯೆಯಾಗಿದೆ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ. ಕೇಸರಿ ಜನರು ರೇಪಿಸ್ಟ್ಗಳನ್ನು ಹಾರ ಹಾಕಿ ಸ್ವೀಕರಿಸಲು ಮತ್ತು ದ್ವೇಷದ ಭಾಷಣ ಮಾಡುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ, ಬಿಜೆಪಿ ಶಾಸಕರು ದಲ್ಲಾಳಿಗಳಾಗಿ ಕೆಲಸ ಮಾಡುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಖಾವಿ ವೇಷ ಧರಿಸಿದ ಸನ್ಯಾಸಿ ಅಪ್ರಾಪ್ತರನ್ನು ಹಿಂಸಿಸುವುದರಲ್ಲಿ ಯಾವುದೇ ತೊಂದರೆಯಿಲ್ಲ. ಅಂದರೆ ಸಿನಿಮಾದಲ್ಲಿ ಬಟ್ಟೆ ಹಾಕಬಾರದು ಅಂತೇನಾ? ನಾನು ಕೇಳುತ್ತಿದ್ದೇನೆ ಎಂದು ಪ್ರಕಾಶ್ ರಾಜ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.