ಕಾಸರಗೋಡು (ವಿಶ್ವಕನ್ನಡಿಗ ನ್ಯೂಸ್): ಕಾಸರಗೋಡು ವಿದ್ಯಾನಗರ ಅಬ್ದುಲ್ಲಾ ಹಾಜಿ ಎಂಬವರು ಮುಂಬೈಯಿಂದ ಬೆಂಗಳೂರಿಗೆ ಉದ್ಯಾನ ಎಂಬ ರೈಲಿನಲ್ಲಿ ಹೊರಟಿದ್ದವರು ಕಾಣೆಯಾಗಿದ್ದಾರೆ ಎಂಬ ಸುದ್ದಿಯನ್ನು ವಿಶ್ವ ಕನ್ನಡಿಗ ನ್ಯೂಸ್ ಇಂದು ಬೆಳಗ್ಗೆ ಪ್ರಕಟಿಸಿತ್ತು.
ಈ ಸುದ್ದಿಯನ್ನ ಕಂಡ ತಳಂಗರೆಯ ಓರ್ವರು ಈ ವ್ಯಕ್ತಿ ಶುಕ್ರವಾರ ಇಲ್ಲಿ ಬಂದಿದ್ದು, ಇಲ್ಲಿಂದ ಕಣ್ಣೂರಿಗೆ ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಈ ಮಾಹಿತಿಯಂತೆ ಕುಟುಂಬಸ್ಥರು ಕಣ್ಣೂರಿನಲ್ಲಿ ವಿಚಾರಿಸದಾಗ ಅವರು ಕಣ್ಣೂರಿನಲ್ಲಿ ಇದ್ದಾರೆ ಎಂದು ಗೊತ್ತಾಗಿದ್ದು, ಕುಟುಂಬಸ್ಥರು ಅವರನ್ನು ಕರೆದುಕೊಂಡು ಬರಲು ಕಣ್ಣೂರಿಗೆ ಹೋಗಿದ್ದಾರೆ.
ಆದುದರಿಂದ ವಿಶ್ವ ಕನ್ನಡಿಗ ನ್ಯೂಸ್ ಈ ಮೊದಲು ಪ್ರಕಟಿಸಿದ ವರದಿಯನ್ನು ಯಾರು ಶೇರ್ ಮಾಡಬಾರದಾಗಿ ಕೇಳಿಕೊಳ್ಳುತ್ತಿದ್ದೇವೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.