(www.vknews.in) ಮಂಗಳೂರು :- ಇತ್ತೀಚೆಗೆ ವಿನಾಕಾರಣ ನಿರುದ್ಯೋಗಿ ಗೂಂಡಾಗಳಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಡಕೂಲಿ ದಾರ್ಮಿಕ ಇಸಾಕ್ ಮೂಲರಪಟ್ನ ಇವರನ್ನು ಜೆಡಿಎಸ್ ಮಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ,ಬಡವರ ಭಂಧು , ಜನನಾಯಕಿ ಡಾ.ಸುಮತಿ ಹೆಗ್ಡೆ ಇವರು ಭೇಟಿ ಮಾಡಿ ಸಾಂತ್ವನ ವ್ಯಕ್ತಪಡಿಸಿದರು. ಈ ಸಂಧರ್ಭ ಮಾತಾನಾಡಿದ ಅವರು ಯಾರೇ ತಪ್ಪು ಮಾಡಿದರೂ ಅವರನ್ನು ತನಿಖೆ ಮಾಡಿ ಶಿಕ್ಷಿಸಲು ಪೋಲಿಸ್ ಇಲಾಖೆ ಇದೆ. ಜನರೇ ಕಾನೂನು ಕೈಗೆತ್ತಿಗೊಂಢರೆ ಪೋಲಿಸರಿಗೇನು ಕೆಳಸ ಎಂದು ಹೇಳಿದರು. ಈ ಘಟನೆಗೆ ಪ್ರಮುಖ ಕಾರಣ ಬಸ್ಸಿನ ಮಾಲೀಕರಾಗಿದ್ದು ಅದರ ಪರ್ಮಿಟ್ ಕ್ಯಾನ್ಸಲ್ ಮಾಡವುದೂ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಕಾರ್ಯ ಅತೀ ಶೀಘ್ರದಲ್ಲಿ ನಡೆಸುವ ಮೂಲಕ ಇದಕ್ಕೆಲ್ಲಾ ಇತಿಶ್ರೀ ಹಾಡಬೇಕು ಎಂದರು.
ಈ ಸಂಧರ್ಬ ದ.ಕ. ಜಿಲ್ಲಾ ಅಲ್ಪ ಸಂ .ಘಟಕದ ಜಾವೇದ್, ದ.ಕ.ಜಿಲ್ಲಾ ಅಲ್ಪಸಂ. ಉಪಾಧ್ಯಕ್ಷ ಲತೀಫ್ ಶಿವಭಾಗ್ , ಜೆಡಿಎಸ್ ಮುಖಂಡರಾದ ಅಲ್ತಾಫ್ ತುಂಬೆ ಹಾಗೂ ಇನ್ನಿತರ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.