ಕೋಲಾರ (ವಿಶ್ವ ಕನ್ನಡಿಗ ನ್ಯೂಸ್) : ಒಬ್ಬ ಮಿನಿಸ್ಟರವ್ನಲ್ಲ ಬ್ರಾಹ್ಮಣ, ನನ್ ತಾಯಾಣೆ ಆತ ಒಂದೂವರೆ ಕೆ.ಜಿ. ಮಾಂಸ ತಿಂತಾನೆ ಎಂದು ಬಿಜೆಪಿ ನಾಯಕ ವರ್ತೂರು ಪ್ರಕಾಶ್ ವರು ಹೇಳುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅವರು ಲಿಂಗಾಯಿತ ಹಾಗೂ ಬ್ರಾಹ್ಮಣರ ಬಗ್ಗೆ ಅವರು ಆಡಿರುವ ಮಾತುಗಳು ಚರ್ಚೆಗೀಡಾಗಿವೆ.
ಅವರು ಕೋಲಾರದಲ್ಲಿ ಪತ್ರಿಕಾಗೋಷ್ಠಿಗೂ ಮುನ್ನ ನಾನ್ ವೆಜ್ ತಿನ್ನೋದು ಹಾಗೂ ಕುಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ಫೋನ್ ನಲ್ಲಿ ಮಾತನಾಡುತ್ತಿರುವ ದೃಶ್ಯ ಇದಾಗಿದ್ದು, ವಿಡಿಯೋದಲ್ಲಿ ಅವರು ಗದಗ್ ಜಿಲ್ಲೆಯ 12 ಜನ ಲಿಂಗಾಯರು ಒಬ್ಬೊಬ್ಬರು ಒಂದೊಂದು ಕೆ.ಜಿ ತಿಂತಾರೆ ಸರ್ ದೇವರಾಣೆ, ಒಬ್ಬ ಮಿನಿಸ್ಟರವ್ನಲ್ಲ ಬ್ರಾಹ್ಮಣ, ಲೇಬರ್ ಮಿನಿಸ್ಟರ್ ಆಗಿದ್ದ ಕಾಂಗ್ರೆಸ್ಸಿಂದ ಬಂದಿದ್ನಲ್ಲ, ನನ್ ತಾಯಾಣೆ ಆತ ಒಂದೂವರೆ ಕೆ.ಜಿ. ತಿಂತಾನೆ ಸರ್, ಸತ್ಯವಾಗ್ಲೂ ನಾನೇ ಸರ್ ಹಾಕಿ ಕೊಡೋದು, ನೀವೊಬ್ರೆ ಸರ್ ದೇವರಾಣೆ ಒಳ್ಳೆಯವರು ಎಂದು ಹೇಳುತ್ತಾರೆ.
ವೈರಲ್ ವಿಡಿಯೋ ವೀಕ್ಷಿಸಿ..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.