(www.vknews.in) ಸುರತ್ಕಲ್ : ಎಸ್.ಕೆ.ಎಸ್.ಎಸ್. ಎಫ್ ದ.ಕ ವೆಸ್ಟ್ ಜಿಲ್ಲಾ ನಡೆಸಿಬರುವ ಬರುವಂತಹ ಮಾನವ ಸರಪಳಿಯ ಪ್ರಚಾರ ಸಂಗಮ ನಿನ್ನೆ ರಾತ್ರಿ ಸುರತ್ಕಲ್ ವಲಯ ಸಮಿತಿ ಕಛೇರಿಯಲ್ಲಿ ಇಲ್ಯಾಸ್ ಸೂರಿಂಜೆ ರವರ ಅಧ್ಯಕ್ಷತೆ ಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಮಂಗಳೂರು ಉತ್ತರ ವಿಧಾನಸಭಾ ಮಾಜಿ ಶಾಸಕರಾದ ಮೊಯಿದಿನ್ ಭಾವ ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ಎಂಬ ಪ್ರಮೇಯ ದೊಂದಿಗೆ ಮಾಡುವ ಮಾನವ ಸರಪಳಿಯನ್ನು ನಾವೆಲ್ಲರೂ ಕೈಜೋಡಿಸಿ ಅತ್ಯಂತ ಯಶಸ್ವಿಯಾಗಿ ನಡೆಸಬೇಕು. ಮಾತ್ರವಲ್ಲ ನಡೆಯುವಂತಹ ಜಾತಿ ಜಾತಿಗಳ ನಡುವೆ ನಡುಯುವಂತಹ ಎಲ್ಲದಕ್ಕೂ ಮಾನವ ಸರಪಳಿ ಮಾಡುವುದರ ಮೂಲಕ ತಡೆಹಾಕುವ ಎಂದರು, ಮುಖ್ಯ ಪ್ರಭಾಷಣೆ ಮಾಡಿದ ನಿಸಾರ್ ಬೆಂಗ್ರೆ ಮಾನವ ಸರಪಳಿಯ ಕಾರ್ಯ ಚಟುವಟಿಕೆಯನ್ನು ಸವಿಸ್ತಾರವಾಗಿ ವಿಸ್ತರಿಸಿದರು. ಅಶಂಸೆ ಭಾಷಣ ಮಾಡಿದ ನಝೀರ್ ವಳಚ್ಚಿಲ್ ಎಸ್.ಕೆ.ಎಸ್.ಎಸ್.ಎಫ್ ಎಂಬುವುದು ಸಾತ್ವಿಕಾರದ ಉಲಮಾಗಳು ಕಟ್ಟಿ ಬೆಳೆಸಿದ ಸಂಘಟನೆಯಾಗಿದೆ ಆದ್ದರಿಂದ ಈ ಪವಿತ್ರ ಪದ ದಲ್ಲಿ ಎಲ್ಲರೂ ಒಂದಾಗಿ ದೇಶವನ್ನು ಕಟ್ಟುವ ಎಂದರು.
ಕಮಲ್ ಚೊಕ್ಕಬೆಟ್ಟು,ಶಾಹುಲ್ ಹಮೀದ್ ಸೂರಿಂಜೆ, ಬಶೀರ್ ಕೃಷ್ಣಾಪುರ, ಮುಹಮ್ಮದ್ ಚೊಕ್ಕಬೆಟ್ಟು, ಹನೀಫ್ ಅದಂ, ಝಫಾರೂಲ್ಲಾ, ಕಲಂದರ್, ಮುಸ್ತಫ ಕೃಷ್ಣಪುರ, ಶಹಿರ್ ಕೊಲ್ನಾಡ್, ಕಲಂದರ್ ಚೊಕ್ಕಬೆಟ್ಟು, ಅಬ್ಬಾಸ್ ಮುಸ್ಲಿಯಾರ್, ರಫೀಕ್ ಸುರಲ್ಪಾಡಿ, ರಿಜ್ವಾನ್ ಚೊಕ್ಕಬೆಟ್ಟು,ಮುದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತ್ವಯ್ಯಿಬ್ ಫೈಝಿ ಸ್ವಾಗತಿಸಿ, ಹನೀಫ್ ಅದಂ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.