ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಮೂಡಬಿದಿರೆಯ ಉದ್ಯಮಿ ಲತೀಫ್ (38) ಕೊಲೆ ಪ್ರಕರಣದ ಪ್ರಮುಖ ಆರೋಪಿಯ ಬಂಧನ ವಿಳಂಬಕ್ಕೆ ಕಾರಣವೇನೆಂದು ತಿಳಿಸುವಂತೆ ಕರ್ನಾಟಕ ಹೈಕೋರ್ಟ್ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ. ಫೆ.13ರೊಳಗೆ ವರದಿ ಸಲ್ಲಿಸುವಂತೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹಾಗೂ ಮೂಲ್ಕಿ ಠಾಣಾಧಿಕಾರಿಗೆ ಸೂಚಿಸಲಾಗಿದೆ.
2020ರ ಜೂನ್ ನಲ್ಲಿ ಮೂಲ್ಕಿಯ ಬ್ಯಾಂಕ್ ಶಾಖೆಯ ಮುಂದೆ ಲತೀಫ್ ಕೊಲೆ ನಡೆದಿತ್ತು. ತಮ್ಮ ಮಾವ ಮುನೀರ್ ಕಾರ್ನಾಡ್ ಮತ್ತು ಹಸಜ್ ಅವರೊಂದಿಗೆ ಪ್ರಯಾಣಿಸುತ್ತಿದ್ದ ಕಾರನ್ನು ಮತ್ತೊಂದು ಕಾರಿನಲ್ಲಿ ಬಂದ ಜನರ ಗುಂಪು ಸುತ್ತುವರಿದು ದಾಳಿ ನಡೆಸಿದೆ. ಲತೀಫ್ ಸ್ಥಳದಲ್ಲೇ ಮೃತಪಟ್ಟಿದ್ದರು. ಗಾಯಗೊಂಡ ಇತರ ಇಬ್ಬರು ದೀರ್ಘಕಾಲದ ಚಿಕಿತ್ಸೆಯ ನಂತರ ಚೇತರಿಸಿಕೊಂಡರು.
ಪ್ರಕರಣದ 10 ಆರೋಪಿಗಳಲ್ಲಿ ಕೆಲವರನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿ ಮುಸ್ತಫಾ ಪಕ್ಷಿಕರೆಯನ್ನು ಬಂಧಿಸಿಲ್ಲ. ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತ್ತು. ಅವರನ್ನು ಬಂಧಿಸದ ಪೊಲೀಸರ ವಿರುದ್ಧ ಮುಬೀನಾ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.