ಬೆಳ್ತಂಗಡಿ (ವಿಶ್ವ ಕನ್ನಡಿಗ ನ್ಯೂಸ್) : ತೋಟದಲ್ಲಿ ದೊಂಟಿಯಲ್ಲಿ ತೆಂಗಿನಕಾಯಿ ತೆಗೆಯುವ ಸಂದರ್ಭದಲ್ಲಿ ತೆಂಗಿನಕಾಯಿ ತಲೆಗೆ ಬಿದ್ದು ವ್ಯಕ್ತಿಯೊರವರು ಮೃತಪಟ್ಟ ಘಟನೆ ಕರಂಬಾರುವಿನ ಕಾಪಿನಡ್ಕದಲ್ಲಿ ಫೆ 8ರಂದು ನಡೆದಿದೆ. ಕರಂಬಾರು ಗ್ರಾಮದ ಕೇಳರ ಕಾಪಿನಡ್ಕ ನಿವಾಸಿ ಸತೀಶ್ ರಾವ್ ಮೃತಪಟ್ಟ ವ್ಯಕ್ತಿ.
ಅವರು ತೋಟದಲ್ಲಿ ತೆಂಗಿನಕಾಯಿ ತೆಗೆಯುವ ಸಂದರ್ಭ ಹಠಾತ್ತಾಗಿ ತೆಂಗಿನಕಾಯಿ ಮೈಮೇಲೆ ಬಿದ್ದ ಪರಿಣಾಮ ತಲೆ ಹಾಗೂ ಕುತ್ತಿಗೆಗೆ ಗಂಭೀರ ಪ್ರಮಾಣದ ಗಾಯವಾಗಿದ್ದು ಕೂಡಲೇ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಸೇರಿಸಿದರೂ ಅವರ ಜೀವ ಉಳಿಸಲು ಸಾಧ್ಯವಾಗಿಲ್ಲ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.