ಮಂಜೇಶ್ವರ (ವಿಶ್ವ ಕನ್ನಡಿಗ ನ್ಯೂಸ್) : ಶಾಲು ಗ್ರೈಂಡರ್ ನಲ್ಲಿ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮಂಜೇಶ್ವರದಲ್ಲಿ ನಡೆದಿದೆ. ಮೃತರನ್ನು ಮಂಜೇಶ್ವರದ ತುಮಿನಾಡ್ ಲಕ್ಷ್ಮಣವೀಡು ಕಾಲೋನಿ ನಿವಾಸಿ ರಂಜನ್ ಎಂಬವರ ಪತ್ನಿ ಜಯಶೀಲಾ (24) ಎಂದು ಗುರುತಿಸಲಾಗಿದೆ. ಮಹಿಳೆ ತುಮಿನಾಡ್ನ ಬೇಕರಿಯಲ್ಲಿ ಕಾರ್ಮಿಕರಾಗಿದ್ದರು.
ಎಂದಿನಂತೆ, ಬೇಕರಿಯಲ್ಲಿ ಸಿಹಿತಿಂಡಿಗಳನ್ನು ತಯಾರಿಸುವಾಗ ಅವರ ಚೂಡಿದಾರ್ ಶಾಲು ಯಂತ್ರದಲ್ಲಿ ಸಿಕ್ಕಿಹಾಕಿಕೊಂಡಾಗ ಅಪಘಾತ ಸಂಭವಿಸಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಇಂದು ಜಯಶೀಲಾ ಅವರ ಜನ್ಮದಿನ ಆಗಿತ್ತು. ಅವರ ಜನ್ಮದಿನದಂದು ಸಂಭವಿಸಿದ ಅನಿರೀಕ್ಷಿತ ದುರಂತವು ಎಲ್ಲರನ್ನೂ ಕಣ್ಣೀರಿನಲ್ಲಿ ಮುಳುಗಿಸಿತು. ಒಂದೂವರೆ ವರ್ಷದ ಹಿಂದೆ ಜಯಶೀಲಾ ಮದುವೆಯಾಗಿದ್ದರು. ಇವರು ವಿಟ್ಲದ ಮಾಲಿಂಕ ಮತ್ತು ಸುನಂದಾ ದಂಪತಿಯ ಪುತ್ರಿ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.