ನವದೆಹಲಿ (ವಿಶ್ವ ಕನ್ನಡಿಗ ನ್ಯೂಸ್) : 61 ವರ್ಷದ ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಅಲ್ಯೂಮಿನಿಯಂ ಬ್ಲಿಸ್ಟರ್ ಫಾಯಿಲ್ ಅನ್ನು ತೆಗೆಯದೆ ಟ್ಯಾಬ್ಲೆಟ್ ನುಂಗಿದ ಕಾರಣ ಅದು ಅನ್ನನಾಳದಲ್ಲಿ ಸಿಲುಕಿಕೊಂಡಿತು. ಅನ್ನನಾಳದಲ್ಲಿ ಮಾತ್ರೆ ಸಿಲುಕಿ ರೋಗಿಯ ಸ್ಥಿತಿ ಅತಂತ್ರವಾಗಿತ್ತು. ತಕ್ಷಣ ಅವರನ್ನು ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ಸಾಗಿಸಲಾಯಿತು. ಶಸ್ತ್ರಚಿಕಿತ್ಸೆಯ ಮೂಲಕ ಅವರನ್ನು ರಕ್ಷಿಸಲಾಯಿತು.
ಇಡೀ ಟ್ಯಾಬ್ಲೆಟ್ ಅನ್ನನಾಳದ ಕಿರಿದಾದ ಭಾಗದಲ್ಲಿ ಸಿಲುಕಿಕೊಂಡಿತು. ಅಲ್ಯೂಮಿನಿಯಂ ಫಾಯಿಲ್ ತುಂಬಾ ಗಟ್ಟಿಯಾಗಿತ್ತು ಮತ್ತು ಚೂಪಾದ ಅಂಚುಗಳನ್ನು ಹೊಂದಿತ್ತು. ಬಲಪ್ರಯೋಗ ಮಾಡಿದರೆ ಅನ್ನನಾಳ ಛಿದ್ರವಾಗುವ ಅಪಾಯವಿತ್ತು. ಬಳಿಕ ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.