ಹೊಸಕಾಡಿ (ವಿಶ್ವ ಕನ್ನಡಿಗ ನ್ಯೂಸ್) : ಒಂದು ವಾರದ ಹಿಂದೆ ಗಾಂಜಾ ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ ಯುವಕನೊಬ್ಬ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮೃತರನ್ನು ಪಾವೂರು ರಸ್ತೆ ಚೌಕಿಯ ರಮೇಶನ ಮಗ ಬೇಶಿತ್ (21) ಎಂದು ಗುರುತಿಸಲಾಗಿದೆ. 20 ದಿನಗಳ ಹಿಂದೆ ಪೊಲೀಸರು ಗಾಂಜಾ ಸಹಿತ ಬಿಶಿತ್ನನ್ನು ಬಂಧಿಸಿದ್ದರು. ರಿಮಾಂಡ್ ಅವಧಿ ಮುಗಿದ ಬಳಿಕ ವಾರದ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಅವರು ನಿನ್ನೆ ಬೆಳಗ್ಗೆಯಿಂದ ಕಾಣದ ಹಿನ್ನೆಲೆಯಲ್ಲಿ ಹುಡುಕಾಡಿದಾಗ ಮನೆ ಸಮೀಪದ ಕುಟಾಳೆ ಗುಡ್ಡದ ಮೇಲಿರುವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಂಜೇಶ್ವರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.