ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ವತಿಯಿಂದ ಡಿಸ್ಟಿಕ್ ವಾಲಿಬಾಲ್ ಚಾಂಪಿಯನ್ ಶಿಪ್ ದಿನಾಂಕ 29/04/2023 ರಂದು ದೇರಳಕಟ್ಟೆಯಲ್ಲಿ ನಡೆಯಲಿದೆ ಎಂದು ತಾಲೂಕು ಅಸೋಸಿಯೇಷನ್ ಗೌರವಾಧ್ಯಕ್ಷರಾದ ಯುಟಿ ಖಾದರ್ ಹಾಗೂ ಅಧ್ಯಕ್ಷರಾದ ಶ್ರೀ ತ್ಯಾಗಂ ಹರೇಕಳ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಅಧೀನದಲ್ಲಿ ನಡೆಯುವ ಪಂದ್ಯಾಟದ ಈ ಸಲದ ಸಂಪೂರ್ಣ ಹೊಣೆಯನ್ನು ಉಳ್ಳಾಲ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಹೊತ್ತುಕೊಂಡಿದೆ. ಟೂರ್ನಿಯಲ್ಲಿ ಜಿಲ್ಲೆಯ ಪ್ರತಿ ತಾಲೂಕಿನಿಂದ ಎರಡು ಪುರುಷರ ಹಾಗೂ ವನಿತೆರ ತಂಡಗಳು ಭಾಗವಹಿಸಲಿದೆ.
ತಾಲೂಕು ಅಸೋಸಿಯೇಷನ್ ಗೌರವಾಧ್ಯಕ್ಷರಾದ ಯುಟಿ ಖಾದರ್, ಗೌರವ ಸಲಹೆಗಾರರಾದ ಶ್ರೀ ರಾಜಾರಾಂ ಭಟ್, ಕಾರ್ಯಾಧ್ಯಕ್ಷರಾದ ಸಂತೋಷ್ ಡಿ ಸೋಝ ಅಧ್ಯಕ್ಷರಾದ ಶ್ರೀ ತ್ಯಾಗಂ ಹರೇಕಳ, ಕಾರ್ಯದರ್ಶಿ ಸುರೇಖಾ ಹರೀಶ್, ಮತ್ತು ಉಳ್ಳಾಲ ಸಂಘದ ಎಲ್ಲಾ ಕಾರ್ಯಕಾರಿ ಸದಸ್ಯರು ಪಂದ್ಯಾಟದ ತಯ್ಯಾರಿಯಲ್ಲಿ ತೊಡಗಿದ್ದಾರೆ.
ಕಳೆದ ಬಾರಿ ಜಿಲ್ಲಾ ಚಾಂಪಿಯನ್ ಶಿಪ್ ಉಸ್ತುವಾರಿಯನ್ನು ಕಡಬ ತಾಲೂಕು ವಹಿಸಿದ್ದು ಮೊದಲ ಚಾಂಪಿಯನ್ನಲ್ಲೇ ಉಳ್ಳಾಲ ತಾಲೂಕು ಪುರುಷರ ವಿಭಾಗದಲ್ಲಿ ಚಾಂಪಿಯನ್ ಅಗಿ ಹೊರಹೊಮ್ಮಿತ್ತು.
ಚಾಂಪಿಯನ್ ಶಿಪ್ನ ಪೂರ್ವಭಾವಿ ಸಿದ್ಧತೆ ಗಾಗಿ ದೇರಳಕಟ್ಟೆಯಲ್ಲಿ ನಡೆದ ಸಭೆಯಲ್ಲಿ. ಜಿಲ್ಲಾ ಅಧ್ಯಕ್ಷರಾದ ಸತೀಶ್ ಪುತ್ತೂರು, ಕಾರ್ಯದರ್ಶಿ ಶಂಕರ್ ಶೆಟ್ಟಿ ,ಹಾಗೂ ಹೈದರ್ ಕೈರಂಗಳ, ಉಪಾದ್ಯಕ್ಷೆಯಾದ ಲಿಲ್ಲಿ ಪಾಯ್ಸ್ ಸಂಘಟನಾ ಕಾರ್ಯದರ್ಶಿ ಅಹ್ಮದ್ ಮುಸ್ತಫಾ ಗೋಳ್ತಮಜಲು, ಉಳ್ಳಾಲ ತಾಲೂಕು ಅಧ್ಯಕ್ಷರಾದ ತ್ಯಾಗಂ ಹರೇಕಳ, ಲೆಜೆಂಡ್ ವಾಲಿವಾಲ್ ಆಟಗಾರರಾದ ಭಗವಾನ್ ದಾಸ್ ಮತ್ತು ಪ್ರಶಾಂತ್ ಕುಮಾರ್ ಕೈರಂಗಳ, ಉಳ್ಳಾಲ ತಾಲೂಕು ನೂತನ ಕಾರ್ಯದರ್ಶಿ ಸುರೇಖಾ ಹರೀಶ್, ಬಾದುಶಾ ಸಂಬರ್ತೋಟ, ನಿಖಿಲ್ ಗಟ್ಟಿ ಕೈರಂಗಳ, ಅನ್ವರ್ ಬೀರಿ, ಗಣೇಶ್ ಕೋಟೆಕಾರು, ಉಳ್ಳಾಲ ತಂಡದ ಕೋಚ್ ಪ್ರಭಾತ್, ರಾಜೇಶ್, ಮತ್ತು ಹಲವು ವಾಲಿಬಾಲ್ ಪೋಷಕರ ಸಹಿತ ಸಂಘದ ಸದಸ್ಯರು ಉಪಸ್ಥಿತರಿದ್ದರು.
✒️ ಇಕ್ಬಾಲ್ ಕೈರಂಗಳ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.