ಸೌದಿ ಅರೇಬಿಯಾ (ವಿಶ್ವ ಕನ್ನಡಿಗ ನ್ಯೂಸ್) ; ಮ೦ಗಳೂರು ತಾಲೂಕಿನ ಮಲ್ಲೂರು ನಿವಾಸಿಯೋರ್ವರು ಸೌದಿ ಅರೇಬಿಯಾದ ಜುಬೈಲ್ ಎ೦ಬಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮಲ್ಲೂರು ಪಲ್ಲಿಬೆಟ್ಟು ಅಬೂಬಕ್ಕರ್ ರವರ ಏಕೈಕ ಪುತ್ರ ಸುಲೈಮಾನ್(35) ಮೃತಪಟ್ಟವರು. ಇವರಿಗೆ ಇಬ್ಬರು ಚಿಕ್ಕ ಮಕ್ಕಳಿದ್ದಾರೆ.
ಸುಲೈಮಾನ್ ಜುಬೈಲಿನ ಲುಮಿನಾಸ್ ಕ೦ಪನಿಯಲ್ಲಿ ಉದ್ಯೋಗಿಯಾಗಿದ್ದರು. ಕಳೆದ ಐದು ದಿನಗಳಿ೦ದ ಯಾರ ಸ೦ಪರ್ಕಕ್ಕೂ ಸಿಗದೆ ಕಾಣೆಯಾಗಿದ್ದ ಸುಲೈಮಾನ್ ಅವರು ಮೃತಪಟ್ಟಿರುವ ವಿವರ ಇದು ತಿಳಿದುಬಂದಿದೆ. ಪ್ರಾರ್ಥಮಿಕ ಮಾಹಿತಿ ಪ್ರಕಾರ ಅವರು ರಸ್ತೆ ದಾಟುತ್ತಿದ್ದಾಗ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.