(www.vknews.in) ; ಪುಣ್ಯ ರಮಳಾನ್ ತಿಂಗಳಲ್ಲಿ ಸಾಂತ್ವನದ ಭಾಗವಾಗಿ ಗಾಂಧಿನಗರ ಯುನಿಟ್ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಅದರಲ್ಲಿ ಒಂದಾದ 20 ನಮಾಝ್ ಖಮೀಸ್ ವಿತರಣೆಯನ್ನು ದಿನಾಂಕ 24-03-2023 ನೇ ಶುಕ್ರವಾರ ಅಸರ್ ನಮಾಝಿನ ಬಳಿಕ ಸುನ್ನೀ ಸೆಂಟರ್ ನಲ್ಲಿ ನಡೆಯಿತು,ಯುನಿಟ್ ಉಪಾಧ್ಯಕ್ಷರಾದ ಸಯ್ಯಿದ್ ತ್ವಾಹಿರ್ ತಂಙಳ್ ಸಅದಿ ಸುಳ್ಯ ರವರ ದುವಾದೊಂದಿಗೆ ಆರಂಬಿಸಿ , ಸಯ್ಯಿದ್ ಝೈನುಲ್ ಆಬಿದ್ ತಂಙಳ್ ಜಯನಗರ ರವರ ಕೈಯಿಂದ ಖಮೀಸ್ ವಿತರಿಸುವ ಮೂಲಕ ಉದ್ಘಾಟಿಸಿದರು.
ಇದೇ ಸಂಧರ್ಭದಲ್ಲಿ ಎಸ್ ವೈ ಎಸ್ ರಾಜ್ಯ ಸಮಿತಿ ಸದಸ್ಯರಾಗಿ ಆಯ್ಕೆ ಯಾದ ಸಿದ್ದೀಕ್ ಕಟ್ಟೆಕ್ಕಾರ್ ರವರಿಗೆ ಶಾಲು ಹೊದಿಸಿ ಅಭಿನಂದಿಸಲಾಯಿತು, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ MJM ಅಧ್ಯಕ್ಷರಾದ ಹಾಜಿ ಜನತಾ ಮುಸ್ತಫಾ,KMJ ZONE ಅಧ್ಯಕ್ಷರಾದ ಹಮೀದ್ ಬೀಜ ಕೊಚ್ಚಿ, SჄS ಸರ್ಕಲ್ ಅಧ್ಯಕ್ಷರಾದ ಲತೀಫ್ ಸಖಾಫಿ ಗೊನಡ್ಕ,SჄS ಗಾಂಧಿನಗರ ಯುನಿಟ್ ಅಧ್ಯಕ್ಷರಾದ ನಿಝಾರ್ ಸಖಾಫಿ ಮುಡೊರು,ಜಬ್ಬಾರ್ ಸಖಾಫಿ ಅಜ್ಜಾವರ, ರಶೀದ್ ಝೈನಿ ಪೆರಾಜೆ,KMJ ಯುನಿಟ್ ಅಧ್ಯಕ್ಷರಾದ ಅಬೂಬಕ್ಕರ್ ಜಟ್ಟಿಪ್ಪಳ್ಳ,ಪವಾಝ್ ಕಟ್ಟತ್ತಾರು, ಅಬ್ದುಲ್ ರಹಿಮಾನ್ ಸಅದಿ,ಖಾದರ್ ಎಂ.ಟಿ, ಹಾರಿಸ್ ಎಸ್.ಎಚ್, ರಶೀದ್ ಕೆರೆಮೂಲೆ, ಹನೀಫ್ ಕಲ್ಳಪಳ್ಳಿ, ಮುನೀರ್ ಆಟೋ,ಕಬೀರ್ ಜಟ್ಟಿಪ್ಪಳ್ಳ, ಅಝೀಝ್ ಜಯನಗರ ಮುಂತಾದವರು ಉಪಸ್ಥಿತರಿದ್ದರು, ಕಾರ್ಯದರ್ಶಿ ಸಿದ್ದೀಕ್ ಬಿ.ಎ ಸ್ವಾಗತಿಸಿ,ಕೋಶಾಧಿಕಾರಿ ನೌಶಾದ್ ಕೆರೆಮೂಲೆ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.