ತಿರುವನಂತಪುರಂ (ವಿಶ್ವ ಕನ್ನಡಿಗ ನ್ಯೂಸ್) : ಯುವಕನೋರ್ವ ಅತ್ತೆಯನ್ನು ಕೊಲೆಗೈದ ಬಳಿಕ ಪತ್ನಿಗೆ ಬೆಂಕಿ ಹಚ್ಚಿ ತಾನೂ ಬೆಂಕಿ ಹಚ್ಚಿಕೊಂಡ ಘಟನೆ ನಡೆದಿದೆ. ಸುಟ್ಟ ಗಾಯಗಳಿಂದ ಪತ್ನಿ ಮುಮ್ತಾಜ್ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ತನ್ನ ಮಗಳ ಎದುರೇ ಅತ್ತೆ ಜಹೀರಾರನ್ನು ಕೊಂದು ಪತ್ನಿಗೆ ಬೆಂಕಿ ಹಚ್ಚಿ ತಾನೂ ಬೆಂಕಿ ಹಚ್ಚಿಆತ್ಮಹತ್ಯೆಗೆ ಯತ್ನಿಸಿದ ಅಲಿ ಅಕ್ಬರ್ ಇನ್ನೂ ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುರುವಾರ ಮುಂಜಾನೆ ನೆಡುಮಂಗಡ ಅಳಿಕೋಡಿನಲ್ಲಿ ಈ ಘಟನೆ ನಡೆದಿದೆ. ತಿರುವನಂತಪುರಂ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸೂಪರಿಂಟೆಂಡೆಂಟ್ ಅಕ್ಬರ್ ತನ್ನ ಪತ್ನಿ ಮುಮ್ತಾಜ್ ಮತ್ತು ಮುಮ್ತಾಜ್ ತಾಯಿ ಜಹೀರಾ ಅವರನ್ನು ಕೊಂದಿದ್ದಾನೆ. ಸ್ಥಳೀಯರು ಮಗಳ ಕೂಗು ಕೇಳಿ ಓಡಿ ಬಂದಾಗ ಕಂಡ ದೃಶ್ಯ ಅತ್ಯಂತ ದಯನೀಯವಾಗಿತ್ತು. 65 ವರ್ಷದ ಜಹೀರಾ ಎಂಬಾಕೆಯನ್ನು ಕಡಿದು ಹತ್ಯೆ ಮಾಡಲಾಗಿದ್ದು, ದೇಹದಾದ್ಯಂತ ಸುಟ್ಟ ಗಾಯಗಳಾಗಿ ಬಿದ್ದಿದ್ದ ಮುಮ್ತಾಜ್ ಅಲಿ ಹಾಗು ಅಕ್ಬರ್.
ತನ್ನ ಪತ್ನಿಯ ತಾಯಿಯನ್ನು ಕೊಂದ ನಂತರ ಅಲಿ ಅಕ್ಬರ್ ತನ್ನ ಪತ್ನಿ ಮುಮ್ತಾಜ್ಳನ್ನು ವಿರೂಪಗೊಳಿಸಿ ಬೆಂಕಿ ಹಚ್ಚಿದ. ಕಿರುಚುತ್ತಿದ್ದ ಮಗಳನ್ನು ಹೊರಗೆ ಹೋಗುವಂತೆ ಹೇಳಿದ ನಂತರ ಅಲಿ ಅಕ್ಬರ್ ಸಹ ಬೆಂಕಿ ಹಚ್ಚಿಕೊಂಡಿದ್ದಾನೆ. ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿರುವ ಅಲಿ ಅಕ್ಬರ್ ಮತ್ತು ಅವರ ಪತ್ನಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಬಳಿಕ ಮಮ್ತಾಜ್ ಆಸ್ಪತ್ರೆಯಲ್ಲಿ ನಿಧನರಾದರು. ಅಲಿ ಅಕ್ಬರ್ ಹಲವರಿಂದ ಸಾಲ ಪಡೆದಿದ್ದರಿಂದ ಕುಟುಂಬಕ್ಕೆ ಆರ್ಥಿಕ ಸಮಸ್ಯೆ ಉಂಟಾಗಿದೆ ಎನ್ನುತ್ತಾರೆ ಸ್ಥಳೀಯರು.
ಮುಮ್ತಾಜ್ ನೆಡುಮಂಗಡ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕಿ. ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಹಿಂದೆ ಅಲಿ ಅಕ್ಬರ್ ವಿರುದ್ಧ ಮುಮ್ತಾಜ್ ಪೊಲೀಸ್ ದೂರು ದಾಖಲಿಸಿದ್ದರು. ಅಲಿ ಅಕ್ಬರ್ ಮನೆಯ ಮೇಲಿನ ಮಹಡಿಯಲ್ಲಿ ವಾಸವಾಗಿದ್ದು, ಅವರ ಪತ್ನಿ, ತಾಯಿ ಮತ್ತು ಮಕ್ಕಳು ಕೆಳ ಮಹಡಿಯಲ್ಲಿ ವಾಸಿಸುತ್ತಿದ್ದರು. ಅಲಿ ಅಕ್ಬರ್ ಮುಂದಿನ ತಿಂಗಳು ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.