ಬಂಟ್ವಾಳ (ವಿಶ್ವ ಕನ್ನಡಿಗ ನ್ಯೂಸ್) : ಪೆಬ್ರವರಿ ತಿಂಗಳಲ್ಲಿ ಪವಿತ್ರ ಉಮ್ರಾ ಯಾತ್ರೆಗೈದ ಬಂಟ್ವಾಳ ತಾಲೂಕಿನ ವಗ್ಗ ನಿವಾಸಿ ಉಸ್ಮಾನ್ ಎಂಬವರು ಉಮ್ರಾ ನಿರ್ವಹಣೆಗೈಯುತ್ತಿರುವಾಗ ಹೃದಯಾಘಾತಗೊಂಡು ಮಕ್ಕಾದ ಕಿಂಗ್ ಫೈಸಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು.
ಅವರು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆ ಪವಿತ್ರ ಮಕ್ಕಾದಲ್ಲಿ ನಡೆಯಲಿದೆ ಎಂದು ಗಲ್ಫ್ ಟೂರ್ಸ್ & ಟ್ರಾವೆಲ್ಸ್ ಪುತ್ತೂರು ಇದರ ಹಜ್ & ಉಮ್ರಾ ಚೀಫ್ ಅಮೀರ್ ಸಿರಾಜುದ್ದೀನ್ ಫೈಝಿ ತಿಳಿಸಿದ್ದಾರೆ. ಮೃತರು ಶಮೀಯುಲ್ಲಾ ಮತ್ತು ಇಮ್ರಾನ್ ರವರ ತಂದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.