ಕಾಸರಗೋಡು (ವಿಶ್ವ ಕನ್ನಡಿಗ ನ್ಯೂಸ್) : ಕಾಸರಗೋಡಿನಲ್ಲಿ ನಿಷೇಧಿತ ಕರೆನ್ಸಿ ನೋಟು ವಶ. 1000 ರೂಪಾಯಿ ನೋಟುಗಳ ಕಟ್ಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಂಡ್ಯತಡಕುವಿನಲ್ಲಿ ಶಾಫಿ ಎಂಬುವವರ ವಾಸವಿಲ್ಲದ ಮನೆಯಿಂದ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಿಷೇಧಿತ ನೋಟುಗಳನ್ನು ಐದು ದೊಡ್ಡ ಗೋಣಿಚೀಲಗಳಲ್ಲಿ ಇಡಲಾಗಿತ್ತು. ಬದಿಯಡ್ಕ ಎಸ್ಐ ಕೆಪಿ ವಿನೋದ್ಕುಮಾರ್ ಅವರಿಗೆ ದೊರೆತ ಗೌಪ್ಯ ಮಾಹಿತಿ ಮೇರೆಗೆ ತನಿಖೆ ನಡೆಸಲಾಗಿದೆ.
ನಕಲಿ ನೋಟು ಪ್ರಕರಣದಲ್ಲಿ ಮಹಿಳಾ ಕೃಷಿ ಅಧಿಕಾರಿಯನ್ನು ಇದೇ 9ರಂದು ಬಂಧಿಸಲಾಗಿತ್ತು. ಆಲಪ್ಪುಳ ಜಿಲ್ಲೆಯಲ್ಲಿ ಕೃಷಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಜಿಶಾಮೋಲ್ ಪ್ರಕರಣದಲ್ಲಿ ಮೊದಲ ಬಂಧಿತರಾಗಿದ್ದರು. ಜಿಶಾಳ ವ್ಯಕ್ತಿತ್ವ ಅಷ್ಟು ಬೇಗ ಯಾರಿಗೂ ಅನುಮಾನ ಬರುವಂತಿರಲಿಲ್ಲ. ಆರ್ಥಿಕವಾಗಿ ಸದೃಢರಾಗಿರುವ 39ರ ಹರೆಯದ ಅವರು ವಿವಿಧ ಕ್ಷೇತ್ರಗಳಲ್ಲಿ ತನ್ನ ಅಸ್ತಿತ್ವವನ್ನು ಮೆರೆದ ವ್ಯಕ್ತಿಯಾಗಿದ್ದರು. ಅವರು ವಿಶೇಷವಾಗಿ ಮಾಡೆಲಿಂಗ್ ಮತ್ತು ಫ್ಯಾಷನ್ ಶೋಗಳಲ್ಲಿ ಸಕ್ರಿಯರಾಗಿದ್ದರು.
ಜಿಶಾ ಫ್ಯಾಶನ್ ಶೋ ಮತ್ತು ಮಾಡೆಲಿಂಗ್ ಮೂಲಕ ಉತ್ತಮ ಆದಾಯವನ್ನು ಹೊಂದಿದ್ದರು, ಅದು ಅವರ ನೆಚ್ಚಿನ ಕಾಲಕ್ಷೇಪವಾಗಿತ್ತು. ಇದರೊಂದಿಗೆ ಕೃಷಿ ಅಧಿಕಾರಿಯ ಕೆಲಸ. ಜಿಶಾಮೋಳ್ ನೀಡಿದ 500 ರೂಪಾಯಿಯ ಈ ನಕಲಿ ನೋಟುಗಳನ್ನು ಬೇರೊಬ್ಬರು ಬ್ಯಾಂಕ್ ಗೆ ನೀಡಿದಾಗ ದೊಡ್ಡ ವಂಚನೆ ಹೊರಬಿದ್ದಿದೆ. ಈ ಪ್ರಕರಣದಲ್ಲಿ ಈಗಾಗಲೇ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.