ಮಂಗಳೂರು (www.vknews.in) : ಕಳೆದ ಚುನಾವಣೆಯಲ್ಲಿ ಮಂಗಳೂರಿನಲ್ಲಿ ವಾಸಿಸುತ್ತಿರುವ ಮಂಗಳಮುಖಿಯರಿಗೆ ಸೂಕ್ತ ನೆಲೆ ಕಲ್ಪಿಸುವರೆಂದು ಬಿಜೆಪಿಯವರು ನಂಬಿಸಿ , ಮತಪಡೆದು , ಗೆದ್ದ ಮೇಲೆ ತಿರುಗಿ ನೋಡದೆ ವಂಚಿಸಿರುವ ಶಾಸಕರ ಬಗ್ಗೆ ಇದೀಗ ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಂಗಳಮುಖಿ ಸದಸ್ಯೆ ನಾಯಕಿಯೊಬ್ಬರು ಬಹಿರಂಗ ಪಡಿಸಿದ್ದು, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ನಾಯಕಿ ಡಾ.ಸುಮತಿ ಎಸ್ ಹೆಗ್ಡೆ ಪರವಾಗಿ ಶ್ರಮವಹಿಸುವುದಾಗಿ ಭಾವುಕರಾಗಿ ನುಡಿದರು .
ಡಾ.ಸುಮತಿ ಎಸ್ ಹೆಗ್ಡೆ ಯವರು ಸ್ವಂತ ತಾಯಿಯಂತೆ ನಮ್ಮನ್ನು ಕಾಣುತ್ತಿದ್ದು ಅವರು ಗೆದ್ದು ಬಂದಲ್ಲಿ ನಮಗೆ ವಾಸಿಸಲು ಯೋಗ್ಯವಾದ ನಿವೇಶನ ಮಾಡಿಕೊಡುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತ ಪಡಿಸಿದ್ದಾರೆ.ಇದಕ್ಕೆ ಜೆಡಿಎಸ್ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಡಾ.ಸುಮತಿ ಎಸ್ ಹೆಗ್ಡೆ ಯವರು ಪ್ರತಿಕ್ರಿಯಿಸಿ ಸನ್ಮಾನ್ಯ ಕುಮಾರಣ್ಣರ ಪಂಚರತ್ನ ಯೋಜನೆಯಲ್ಲಿ 4ನೇ ಯದ್ದು ಸೂರಿಲ್ಲದವರಿಗೆ ಸೂರು ಇದರಡಿಯಲ್ಲಿ ಖಂಡಿತವಾಗಿಯೂ ಒದಗಿಸಿಕೊಡುವುದಾಗಿ ಭರವಸೆ ನೀಡಿದರು. ಸುಮತಿ ಎಸ್ ಹೆಗ್ಡೆ ಬಗ್ಗೆ ಮಾತನಾಡುತ್ತಾ ಭಾವುಕರಾಗಿ ನುಡಿದ ಮಂಗಳಮುಖಿ ನಾಯಕಿಯ ಭಾಷಣ ಇದೀಗ ವೈರಲ್ ಆಗಿದ್ದು ಕೇಳುಗರಲ್ಲಿ ಕಣ್ಣೀರು ಸುರಿಸುವಂತಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.