ಚಿಕ್ಕಬಳ್ಳಾಪುರ,(ವಿಶ್ವ ಕನ್ನಡಿಗ ನ್ಯೂಸ್) ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕೆಲ ಅಧಿಕಾರಿಗಳು ಏಕಪಕ್ಷೀಯವಾಗಿ ವರ್ತಿಸುವ ಸಂಶಯವಿದ್ದು ಕೂಡಲೇ ಆ ಅಧಿಕಾರಿಗಳನ್ನು ವರ್ಗಾವಣೆ ಅಥವಾ ಬದಲಾಯಿಸಲು ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಹೇಳಿದರು.
ತಾಲೂಕಿನ ಮಂಚನಬಲೆ ಗ್ರಾಮದಲ್ಲಿ 63ನೇ ದಿನದ ಮನೆ ಮನೆ ಭೇಟಿ ಅಭಿಯಾನ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿಧಾನಸಭಾ ಚುನಾವಣೆಯಲ್ಲಿ ಕೆಲ ಅಧಿಕಾರಿಗಳು ಏಕಪಕ್ಷೀಯವಾಗಿ ಕಾರ್ಯನಿರ್ವಹಿಸುವ ಸಂಶಯದಿಂದ ಅಧಿಕಾರಿಗಳನ್ನು ಬದಲಾಯಿಸಲು ಕ್ರಮ ಕೈಗೊಳ್ಳಬೇಕೆಂದು ಈಗಾಗಲೇ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ ಆಯೋಗವು ಕೈಗೊಳ್ಳುವ ನಿರ್ಧಾರದ ನಂತರ ಮುಂದಿನ ಹೋರಾಟದ ರೂಪುರೇಷೆಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಜನರ ಕಷ್ಟಗಳಿಗೆ ಸ್ಪಂದಿಸದೆ ಹೈ ಹೆಲೋಯೆಂದು ಹೇಳಿಕೊಂಡು ಕಾಲಹರಣ ಮಾಡಿ ಕನಿಷ್ಠ ಸೌಜನ್ಯಕ್ಕಾದರೂ ಜನರ ಸಮಸ್ಯೆಗಳನ್ನು ಆಲಿಸದ ಆರೋಗ್ಯ ಸಚಿವರು ನಿವೇಶನ ಹಂಚಿಕೆಯ ನೆಪದಲ್ಲಿ ಜನರನ್ನು ದಿಕ್ಕುತಪ್ಪಿಸುವ ರಾಜಕಾರಣ ಮಾಡಲು ಹೊರಟಿದ್ದಾರೆ ಕ್ಷೇತ್ರದ ಜನ ಬುಧ್ಧಿವಂತರಿದ್ದಾರೆ ಯಾರು ಚುನಾವಣೆಗಾಗಿ ಗಿಮಿಕ್ ಮಾಡುತ್ತಿದ್ದಾರೆ ಎಂದು ನೋಡುತ್ತಿದ್ದಾರೆ ಈ ಬಾರಿಯ ಚುನಾವಣೆಯಲ್ಲಿ ಸೂಕ್ತ ಪಾಠವನ್ನು ಕಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಚಿವರ ವೈಯಕ್ತಿಕ ಅಭಿವೃಧ್ಧಿಯೇ ಸಾಧನೆ: ಕ್ಷೇತ್ರದಲ್ಲಿ ಕಳೆದ 10 ವರ್ಷಗಳಿಂದ ಯಾವುದೇ ರೀತಿಯ ಅಭಿವೃಧ್ಧಿ ಕೆಲಸಗಳು ನಡೆದಿಲ್ಲವೆಂದು ದೂರಿದ ಮಾಜಿ ಶಾಸಕರು ಆರೋಗ್ಯ ಸಚಿವರು ಪೆರೆಸಂದ್ರ ಸುತ್ತಮುತ್ತಲೂ ವೈಯಕ್ತಿವಾಗಿ ಅಭಿವೃಧ್ಧಿ ಹೊಂದಿದ್ದಾರೆ ಅದೇ ದೊಡ್ಡ ಸಾಧನೆಯೆಂದು ವ್ಯಂಗ್ಯವಾಡಿದ ಮಾಜಿ ಶಾಸಕರು ಸಾಧನೆ ಮಾಡಿದ್ದಾರೆ ಅದೇನೆಂದರೆ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವ ಕ್ಷೇತ್ರದಲ್ಲಿನ ಅವ್ಯವಸ್ಥೆಗಳನ್ನು ಪ್ರಶ್ನಿಸಿದರೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿ ರೌಡಿಶೀಟರ್ ಅವರ ದೊಡ್ಡ ಸಾಧನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೃದು ಸ್ವಭಾವ ವೀಕನೆಸ್ ಅಲ್ಲ: ಮೃದು ಸ್ವಭಾವ ಎಂಬುದು ವೀಕನೆಸ್ ಅಲ್ಲ ಒಳ್ಳೆಯತನ ತೋರಿಸುತ್ತದೆ ಕ್ಷೇತ್ರಾದ್ಯಂತ ಮನೆ ಮನೆ ಭೇಟಿ ವೇಳೆಯಲ್ಲಿ ಜನ ನೀವು ಬಹಳ ಒಳ್ಳೆಯವರು ನಿಮ್ಮಂತಹವರು ಬೇಕು ಎಂದು ಬಯಸುತ್ತಿದ್ದಾರೆ ಈ ಬಾರಿ ಚುನಾವಣೆಯಲ್ಲಿ ಬೆಂಬಲಿಸಿ ಆಶೀರ್ವಾದ ಮಾಡುವುದಾಗಿ ವಾಗ್ದಾನ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕರು ಜನಪ್ರತಿನಿಧಿಗಳು ಒಳ್ಳೆಯತನದ ಜೊತೆಗೆ ಕಠಿಣ ನಿರ್ಧಾರವನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ ಎಂದರಲ್ಲದೆ ಅಧಿಕಾರ ಇದೆಯೆಂದು ದರ್ಪ ತೋರಿಸುವುದು ಒಳ್ಳೆಯ ಆಡಳಿತವಲ್ಲವೆಂದು ಪರೋಕ್ಷವಾಗಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಗೆ ಟಾಂಗ್ ನೀಡಿದರು.
ಅಮೂಲಗೆ ನಂದಿನಿ ವಿಲೀನ ಖಂಡನೀಯ: ಕರ್ನಾಟಕದಲ್ಲಿ ನಂದಿನಿ ಸಂಸ್ಥೆಯನ್ನು ಬೆಳೆಸಲು ದಿ.ಎಂವಿ ಕೃಷ್ಣಪ್ಪ ಅವರ ಪಾತ್ರ ಪ್ರಮುಖವಾಗಿದೆ ಜೊತೆಗೆ ಅವರ ಕನಸು ಸಹ ಹೌದು ಅವರು ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ ವಿದೇಶಿ ತಳಿಗಳನ್ನು ತಂದು ಕ್ಷೀರಕ್ರಾಂತಿಯನ್ನು ಹುಟ್ಟು ಹಾಕಿದರು ನಂದಿನಿ ಇವತ್ತು ದೊಡ್ಡ ಮಟ್ಟದಲ್ಲಿ ಬೆಳೆದಿದೆ ನಮ್ಮ ತಂದೆಯವರು ಸಹ ಕೋಲಾರ ಹಾಲು ಒಕ್ಕೂಟಕ್ಕೆ ಪ್ರಥಮ ಅಧ್ಯಕ್ಷರಾಗಿದ್ದರು ನಂದಿನಿ ಸಮೃಧ್ಧಿಯಾಗಿದೆ ಇವತ್ತು ಹಾಲಿನ ಕೊರತೆಯಾಗಿದೆ ಇಂತಹ ಸಂದರ್ಭದಲ್ಲಿ ಗುಜರಾತ್ ನ ಅಮೂಲ ಜೊತೆಗೆ ನಂದಿನಿಯನ್ನು ವಿಲೀನ ಮಾಡುವುದು ಸರಿಯಲ್ಲ ಅದು ಖಂಡನೀಯ ಈ ಹಿಂದೆಯೂ ಹೋರಾಟ ಮಾಡಿದ್ದೇನೆ ಮುಂದೆಯೂ ಸಹ ನಂದಿನಿಯನ್ನು ಅಮೂಲಗೆ ವಿಲೀನ ಮಾಡಲು ಬಿಡುವುದಿಲ್ಲವೆಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ.ಮುನೇಗೌಡ ಮಾತನಾಡಿ ಕ್ಷೇತ್ರದಲ್ಲಿ ಕಳೆದ 63 ದಿನಗಳಿಂದ ಮಾಜಿ ಶಾಸಕರ ನೇತೃತ್ವದಲ್ಲಿ ಮನೆ ಮನೆ ಭೇಟಿ ಮಾಡುವ ಜೊತೆಗೆ ಮಾಜಿ ಸಿಎಂ ಕುಮಾರಣ್ಣ ಅವರು ಜಾರಿಗೆ ತಂದಿರುವ ಪಂಚರತ್ನ ಯೋಜನೆಗಳ ಕುರಿತು ಮಾಹಿತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇನೆ ಮುಂದಿನ 6 ದಿಗಳಲ್ಲಿ ಮಾಜಿ ಶಾಸಕರು 69 ನೇ ವರ್ಷ ಹುಟ್ಟು ಹಬ್ಬವೂ ಬರಲಿದೆ ಅಷ್ಟರ ವೇಳೆಯಲ್ಲಿ 69 ದಿನಗಳ ಕ್ಷೇತ್ರ ಪ್ರವಾಸವನ್ನು ಮುಗಿಸುತ್ತೇನೆ ಕ್ಷೇತ್ರದಲ್ಲಿ ಬಚ್ಚೇಗೌಡ ಅಣ್ಣವರು ಶಾಸಕರಾಗಬೇಕು ಮತ್ತು ರಾಜ್ಯದಲ್ಲಿ ಕುಮಾರಣ್ಣ ಅವರು ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುಧ್ಧಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆಸಿ ರಾಜಕಾಂತ್, ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಕೆ.ಆರ್.ರೆಡ್ಡಿ, ಮಂಚನಬಲೆ ಮಧು,ಅಂಗರೇಖನಹಳ್ಳಿ ರವಿಕುಮಾರ್, ಕವಿತಾ ರೆಡ್ಡಿ,ಸತೀಶ್,ತಾಂಡ್ರ ಮಗದಹಳ್ಳಿ ನಾಗರಾಜ್, ರಾಜ್ಯ ಜೆಡಿಎಸ್ ಅಲ್ಪಸಂಖ್ಯಾತರ ವಿಭಾಗದ ಕಾರ್ಯಕಾರಿಣಿ ಸಮಿತಿಯ ಸದಸ್ಯ ನೂರುಲ್ಲಾ ಮತ್ತಿತರರು ಉಪಸ್ಥಿತರಿದ್ದರು.
ಬಾಕ್ಸ್: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ನಾವು 63 ದಿನಗಳಿಂದ ಕ್ಷೇತ್ರ ಪ್ರವಾಸವನ್ನು ಮಾಡಿದ್ದೇವೆ ಇದುವರೆಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ ಇನ್ನೂ ಇರುವ ಕೆಲವೂ ದಿನಗಳಲ್ಲಿ ಕ್ಷೇತ್ರದಲ್ಲಿ ಸಂಚರಿಸಲು ಹೇಗೆ ಸಾಧ್ಯವೆಂದು ಸ್ವತಃ ಕ್ಷೇತ್ರದ ಜನ ಪ್ರಶ್ನಿಸುತ್ತಿದ್ದಾರೆ ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಕಾರ್ಯಕರ್ತರು ಸಹ ಜೆಡಿಎಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಜೊತೆಗೆ ಆ ಪಕ್ಷದ ಮುಖಂಡರು ಸಹ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಮಾಜಿ ಶಾಸಕ ಕೆಪಿ ಬಚ್ಚೇಗೌಡ ಹೊಸ ಬಾಂಬ್ ಸಿಡಿಸಿದರು.
ವರದಿ: ತೇ.ಮೀಂ.ಅನ್ಸಾರಿ ಶಿಡ್ಲಘಟ್ಟ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.