(www.vknews.in) ; ನಾಡು, ಕುಟುಂಬಗಳನ್ನು ತ್ಯಜಿಸಿ ಭಾರೀ ಮೊತ್ತದ ಹಣವನ್ನೂ, ಶ್ರಮವನ್ನೂ, ಸಮಯವನ್ನೂ ವಿನಿಯೋಗಿಸಿ ತಾನು ನಿರ್ವಹಿಸುವ ಹಜ್ ಕರ್ಮಕ್ಕೆ ತಕ್ಕದಾದ ಪ್ರತಿಫಲ ಲಭಿಸದೆ ಹೋದಲ್ಲಿ ಭಾರೀ ನಷ್ಟವನ್ನು ಅನುಭವಿಸಬೇಕಾಗಿ ಬಂದೀತೆಂಬ ಪೂರ್ಣ ಪ್ರಜ್ಞೆ ಎಲ್ಲಾ ಹಾಜಿಗಳಲ್ಲೂ ಇರಬೇಕು.ಹಜ್ ಸ್ವೀಕಾರವಾಗಲು ಅನಿವಾರ್ಯ ವಾದುದನ್ನೆಲ್ಲಾ ಶ್ರದ್ಧಾ ಪೂರ್ವಕ ನಿರ್ವಹಿಸಬೇಕೆಂದು ಬಹು ಅಸ್ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್ ನುಡಿದರು.
ಅವರು ಪುತ್ತೂರಿನ ಪ್ರತಿಷ್ಠಿತ ಹಜ್ ಉಮ್ರಾ ಟ್ರಾವೆಲ್ ಏಜೆನ್ಸಿಯಾದ ಗಲ್ಫ್ ಟೂರ್ಸ್ & ಟ್ರಾವೆಲ್ಸ್ ನ ಆಶ್ರಯದಲ್ಲಿ ಈ ವರ್ಷದ ಹಜ್ ಯಾತ್ರೆ ಕೈಗೊಳ್ಳಲಿರುವ ಯಾತ್ರಾರ್ಥಿಗಳಿಗೆ ಕಬಕ ಮಸೀದಿ ಹಾಲ್ ನಲ್ಲಿ ನಡೆದ ಹಜ್ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಖ್ಯಾತ ವಿದ್ವಾಂಸರಾದ ಬಹು ವಾಲೆ ಮುಂಡೇವು ಉಸ್ತಾದ್, ಕಬಕ ಮಸೀದಿ ಖತೀಬರಾದ ಅಬ್ದುಲ್ ಹಮೀದ್ ಬಾಖವಿ ಶುಭಹಾರೈಸಿ ಮಾತನಾಡಿದರು. ಸಂಸ್ಥೆಯ ಮಾಲಕರಾದ ಸುಲೈಮಾನ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಚೀಫ್ ಅಮೀರ್ ಉಸ್ತಾದ್ ಸಿರಾಜುದ್ದೀನ್ ಫೈಝಿ ಬಪ್ಪಳಿಗೆ ತರಬೇತಿ ನೀಡಿದರು.
ಹಜ್ ತಂಡದಲ್ಲಿ 75 ಮಂದಿ: ಸಿರಾಜುದ್ದೀನ್ ಫೈಝಿ ನೇತ್ರತ್ವ
ಖಾಸಗಿ ಟೂರ್ ಆಪರೇಟರ್ ಗಳಿಗೆ ಹಜ್ ಕೋಟಾ ವಿತರಣೆಯ ಗೊಂದಲಗಳ ಮಧ್ಯೆ ಗಲ್ಫ್ ಟೂರ್ಸ್ ಸಂಸ್ಥೆಗೆ ಪ್ರಥಮ ಬ್ಯಾಚ್ ನಲ್ಲಿ 75ಮಂದಿಯನ್ನು ಕೊಂಡೊಯ್ಯಲು ಅನುಮತಿ ಲಭಿಸಿದ್ದು, ಸಿರಾಜುದ್ದೀನ್ ಫೈಝಿ ಯವರ ನೇತೃತ್ವದಲ್ಲಿ ಜೂನ್ ಮೊದಲನೇ ವಾರದಲ್ಲಿ ಮಕ್ಕಾಕೆ ಪ್ರಯಾಣಿಸಲಿದ್ದಾರೆ.ಮಹಿಳಾ ಯಾತ್ರಾರ್ಥಿಗಳ ಸೇವೆಗಳಿಗೆ ಮಹಿಳಾ ಅಮೀರನ್ನೂ ನೇಮಕ ಮಾಡಲಾಗಿದೆ.
ಚೀಫ್ ಅಮೀರ್ ಫೈಝಿಗೆ ಸನ್ಮಾನ
ಹಜ್ ಉಮ್ರಾ ಯಾತ್ರಾ ರಂಗದಲ್ಲಿ ಉನ್ನತ ಸೇವೆ ಸಲ್ಲಿಸುತ್ತಿರುವ ಅಮೀರ್ ಸಿರಾಜುದ್ದೀನ್ ಫೈಝಿಯವರನ್ನು ಖ್ಯಾತ ವೈದ್ಯರೂ ಸಮಾಜ ಸೇವಕರೂ ಆದ ಡಾಕ್ಟರ್ ಅಬೂಬಕರ್ ಸಿದ್ದೀಕ್ ಅಡ್ಡೂರು ಹಾಗೂ ಖ್ಯಾತ ನ್ಯಾಯವಾದಿ ಗಳಾದ ನೋಟರಿ ಹಬೀಬುರ್ರಹ್ಮಾನ್ ಬಿ.ಸಿ.ರೋಡ್ ಜೊತೆಯಾಗಿ ಸ್ಮರಣಿಕೆ, ಫಲಪುಷ್ಪ ನೀಡಿ,ಶಾಲು ಹೊದಿಸಿ ಸನ್ಮಾನಿಸಿದರು.
ಸಹಾಯ ಧನ ವಿತರಣೆ: ಕಳೆದ ಐದಾರು ವರ್ಷಗಳಿಂದ ಕಿಡ್ನಿ ರೋಗದಿಂದ ಬಳಲುತ್ತಿದ್ದು ಇದೀಗ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ನಡೆಸುತ್ತಾ, ಸಂಕಷ್ಟ ದಲ್ಲಿರುವ ಮದ್ರಸ ಅಧ್ಯಾಪಕ ರೊಬ್ಬರಿಗೆ ಸಂಸ್ಥೆಯ ವತಿಯಿಂದ ಹಾಗೂ ನೆರೆದ ಹಜ್ ಯಾತ್ರಿಕರಿಂದ ಸಹಾಯ ಧನ ಸಂಗ್ರಹಿಸಿ ನೀಡಲಾಯಿತು.
ಸಮಾರಂಭದಲ್ಲಿ ಮೊಯ್ದಿನ್ ಹಾಜಿ ಕಂಬಳಬೆಟ್ಟು, ಆಸಿಫ್ ಕಬಕ,KM ಕಂಸ್ಟ್ರಕ್ಷನ್ ನ ಹಂಝ ಸಾಲ್ಮರ,ಉದ್ಯಮಿ ಇಬ್ರಾಹಿಂ ಬಾತಿಶಾ ಹಾಜಿ ಪಾಟ್ರಕೋಡಿ,ನಝೀರ್ ಅರ್ಶದಿ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ನಸೀಮ್ ಬೆಳ್ಳಾರೆ,ಹಾಫಿಲ್,ಉನೈಸ್ ಕಬಕ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.