(www.vknews.in) : ಅಂದು ನಾನು ಮಕ್ಕತುಲ್ ಮುಕರ್ರಮಾದಲ್ಲಿದ್ದೆ. ಜಿದ್ದಾದಲ್ಲಿನ ನಕಾಶಾ ಎಂಬಲ್ಲಿ ನಡೆಯುವ ಮಂಜನಾಡಿ ಅಲ್ ಮದೀನಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶೈಖುನಾ ಅಬ್ಬಾಸ್ ಉಸ್ತಾದರ ಜೊತೆ ನಾನು ಸಾಗಿದ್ದೆ. ಉಸ್ತಾದರ ಜೊತೆಗಿನ ಯಾತ್ರೆಯು ಖಂಡಿತವಾಗಿಯೂ ಅವಿಸ್ಮರಣೀಯವಾಗಿತ್ತು.
ದರ್ಸ್’ನಲ್ಲಿ ತಾನು ಮುತಅಲ್ಲಿಮಾಗಿ ಕಲಿಯುತ್ತಿರುವಾಗಲೇ ಅನಾಥ ಮಕ್ಕಳ ನೆರವಿನ ಬಗ್ಗೆ, ನಿರ್ಗತಿಕರ ಸಹಾಯದ ಬಗ್ಗೆ, ಬಡ ಹೆಣ್ಮಕ್ಕಳ ಮದುವೆಯ ಬಗ್ಗೆ ಕನಸು ಕಂಡಿದ್ದರವರು. ಇವೆಲ್ಲಕ್ಕೂ ತಕ್ಕ ಭೂಮಿಯ ಹುಡುಕಾಟದಲ್ಲಿದ್ದ ಅವರಿಗೆ ಸನಿಹದಲ್ಲೇ ಇದ್ದ ವಿಶಾಲ ಪ್ರದೇಶ ದೃಷ್ಟಿಗೆ ಬಿದ್ದದ್ದೇ ತಡ, ಖಾಲಿ ಬಂಜರು ಭೂಮಿಯಾಗಿ, ಒಣ ಬೆಟ್ಟವಾಗಿ ಪಾಳು ಬಿದ್ದಿದ್ದ ಇಡೀ ಗುಡ್ಡ ಪ್ರದೇಶವನ್ನೇ ದೀನೀ ಸಮುಚ್ಚಯವಾಗಿ ಬದಲಾಯಿಸಿ ಬಿಟ್ಟರು. ಮರ್ಝೂಖಿಗಳು, ಹಾಫಿಲ್’ಗಳು, ಸ್ವಾಫಿಯಾಗಳು ಮುಂತಾದವರಿಗೆ ತರಬೇತು ಕೇಂದ್ರವಾಗಿ ಇದು ಮಾರ್ಪಟ್ಟಿದೆ.
ಮದೀನಾದ ಮಾಧುರ್ಯವನ್ನೇ ತನ್ನ ಎದೆಯಾಳದಲ್ಲಿ ತುಂಬಿಸಿ ಬದುಕಿದ್ದ ಮಹಾನುಭಾವರಾಗಿದ್ದರು ಅಲ್ ಮದೀನಾದ ಶಿಲ್ಪಿ ಷರಫುಲ್ ಉಲಮಾ ಅಬ್ಬಾಸ್ ಉಸ್ತಾದ್. ಉಸ್ತಾದರು, ತನ್ನ ಕೋಣೆಗೆ ಹೋಗುವ ಬಾಗಿಲಿನ ಮೇಲ್ಭಾಗದಲ್ಲಿ ತೂಗಿಸಿರುವ ಬೈತ್’ಗಳು, ಖಂಡಿತವಾಗಿಯೂ ಅದು ನಮ್ಮನ್ನು ಮದೀನಾದತ್ತ ಸೆಳೆದೊಯ್ಯುವ ಚುಂಬಕ ವಾಕ್ಯಗಳಾಗಿವೆ. ತನ್ನ ಶಿಕ್ಷಣ ಸಮುಚ್ಚಯಕ್ಕೆ ಮದೀನಾದ ಹೆಸರನ್ನೇ ನೀಡುವ ಮೂಲಕ, ಇಡೀ ಅಲ್ ಮದೀನಾ ಶಿಕ್ಷಣ ಸಮುಚ್ಚಯದ ಪ್ರಾಂಗಣಕ್ಕೆ ಪುಣ್ಯ ಮದೀನಾದೊಂದಿಗಿನ ಸಂಬಂಧ ಕಲ್ಪಿಸುವ ವಿನೂತನ ಶೈಲಿಯನ್ನು ಅವರು ಹೊಂದಿರುವುದು ಖಂಡಿತವಾಗಿಯೂ ಅದು ಮರೆಯಲಾಗದ ವಾಸ್ತವ ಸಂಗತಿಯಾಗಿದೆ.
ಒಮ್ಮೆ ಅಲ್ ಮದೀನಾದಲ್ಲಿ ಬುರ್ದಾ ಮಜ್’ಲಿಸ್ ನ ಸ್ಪರ್ಧೆ ನಡೆಸುವ ಬಗ್ಗೆ ಅನುಮತಿ ಕೇಳಲು ಉಸ್ತಾದರನ್ನು ಸಮೀಪಿಸಿದೆವು. ಬುರ್ದಾ ಅನ್ನುವುದು ಮದೀನಾದ ಮುತ್ತುನಬಿ ﷺ ರವರ ಕಾವ್ಯಾಲಾಪನೆ ಯಾದುದರಿಂದ ಅದಕ್ಕೆ ಸಂಪೂರ್ಣ ಒಪ್ಪಿಗೆ ಸಿಕ್ಕಿತ್ತು. ಯುಎಇ ರಾಷ್ಟ್ರದಲ್ಲಿರುವ ನಲ್ಕ ಅಬ್ದುಲ್ಲ ಹಾಜಿಯವರ ನಿಯಂತ್ರಣದಲ್ಲಿ ಈ ಬುರ್ದಾ ಸ್ಪರ್ಧೆ ಯನ್ನು ಆಯೋಜಿಸಲಾಗಿತ್ತು.
ಉಸ್ತಾದರ ವಫಾತ್ ದಿನ ;
ನಾಲ್ಕು ವರ್ಷ ಹಿಂದಿನ ದ್ಸುಲ್ ಖಅದ್ 25 ರ ಸೋಮವಾರ. ಅಂದು ಅಲ್ ಮದೀನಾಗೆ ತೆರಳಿದ್ದೆ. ಸುಲ್ತಾನುಲ್ ಉಲಮಾ ರವರು ಆಗಮಿಸಿದ್ದರು. ಇಡೀ ಮೈದಾನದಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಅಭಿಮಾನಿಗಳ ನೆರೆದ ಮಹಾ ಸಂಗಮವು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಅಲ್ಲಾಹು ಅವರನ್ನೂ ನಮ್ಮನ್ನೂ ಜನ್ನಾತುಲ್ ಫಿರ್ದೌಸಿನಲ್ಲಿ ಹಬೀಬ್ ಸಲ್ಲಲ್ಲಾಹು ಅಲೈಹಿವಸಲ್ಲಮರ ಜೊತೆ ಒಗ್ಗೂಡಿಸಲಿ -ಆಮೀನ್
✍️ ಜಿ.ಎಂ ಕಾಮಿಲ್ ಸಖಾಫಿ, (ಸುನ್ನೀ ಸಂಘಟನಾ ನಾಯಕರು, ಮುಶಾವರ ಸದಸ್ಯರು, ಜಂಇಯ್ಯತುಲ್ ಉಲಮಾ ಕರ್ನಾಟಕ)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.