(www.vknews.in) : ಬೈಕ್ ಪೂಜೆಗೆಂದು ಗಂಗೆಗೆ ಬಂದ 14 ವರ್ಷದ ಯುವಕನೊಬ್ಬ ದುರಂತ ಅಂತ್ಯ ಕಂಡಿದ್ದಾನೆ. ನದಿಯಲ್ಲಿ ಸ್ನಾನ ಮಾಡಿದ ನಂತರ ಅಂಕಿತ್ ಪೂಜೆ ಮಾಡಲು ಮುಂದಾದಾಗ ಮೊಸಳೆ ದಾಳಿ ಮಾಡಿದೆ. ಸ್ನಾನ ಮಾಡುತ್ತಿದ್ದ ವೇಳೆ ಅಂಕಿತ್ ನನ್ನು ಮೊಸಳೆ ನೀರಿಗೆ ಎಳೆದುಕೊಂಡು ಹೋಗಿ ಜೀವಂತವಾಗಿ ತಿಂದು ಹಾಕಿದೆ.
ಸಂಬಂಧಿಕರು ಮತ್ತು ಸ್ಥಳೀಯರು ಬೊಬ್ಬೆ ಹಾಕಿದರೂ ಅಂಕಿತ್ ದೇಹದ ಕೆಲವು ಭಾಗಗಳನ್ನು ಮಾತ್ರ ಸಂಬಂಧಿಕರು ಪಡೆದುಕೊಂಡಿದ್ದಾರೆ. ಸಿಟ್ಟಿಗೆದ್ದ ಸಂಬಂಧಿಕರು ಸ್ಥಳೀಯರೊಂದಿಗೆ ಮೊಸಳೆಯನ್ನು ದಡಕ್ಕೆ ಎಳೆದೊಯ್ದು ದೊಣ್ಣೆಯಿಂದ ಹೊಡೆದು ಕೊಂದಿದ್ದಾರೆ.
ಬಿಹಾರದ ವೈಶಾಲಿಯ ರಾಘೋಪುರ ಡಿಯಾರಾದಲ್ಲಿ ಈ ದಾರುಣ ಘಟನೆ ನಡೆದಿದೆ. ಘಟನೆಯ ವಿಡಿಯೋ ಕಳೆದ ದಿನ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.