ಪುತ್ತೂರು (www.vknews.in) : ದಿನಾಂಕ 15/06/2023 ರಂದು ಸೌದಿ ಅರೇಬಿಯಾದ ರಿಯಾದ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟ ನಗರದ ಚಿಕ್ಕಪುತ್ತೂರಿನ ಎಲ್.ಟಿ.ಬಾವು (ಎಲ್.ಟಿ.ಮುಹಮ್ಮದ್)ರವರ ಪಾರ್ಥಿವ ಶರೀರವು ನಾಳೆ 21/06/2023 ಬುಧವಾರ ಮಧ್ಯಾಹ್ನ 02:00 ಘಂಟೆಯ ಸಮಯಕ್ಕೆ ಪುತ್ತೂರಿಗೆ ತಲುಪಲಿದೆ.
ಪಾರ್ಥಿವ ಶರೀರವು ಅವರ ಹಿರಿಯ ಅಣ್ಣ ಪುತ್ತೂರಿನ ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷರಾದ ಎಲ್.ಟಿ. ಅಬ್ದುಲ್ ರಝಾಕ್ ಹಾಜಿಯವರ (ಪುತ್ತೂರಿನ ರೈಲ್ವೆ ಸ್ಟೇಷನ್ ಬಳಿಯ) ಮನೆಗೆ ತಲುಪಲಿದ್ದು, ಮನೆಯಲ್ಲಿ ಜನಾಝಾ ಸಂದರ್ಶಕರಿಗೆ ನೋಡುವ ಅವಕಾಶವನ್ನು ಮಾಡಲಾಗಿದೆ. ಬಳಿಕ ಪುತ್ತೂರಿನ ಸಾಲ್ಮರ ಜುಮಾ ಮಸೀದಿಯಲ್ಲಿ ಮಯ್ಯತ್ ನಮಾಝ್ ನಿರ್ವಹಿಸಿ, ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.