ಉಡುಪಿ (www.vknews.in) : ಪೇಜಾವರ ಮಠದ 60ರ ಹರೆಯದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸುಮಾರು 40 ಅಡಿ ಆಳದ ಬಾವಿಗೆ ಬಿದ್ದ ಬೆಕ್ಕೊಂದನ್ನು ಬಾವಿಗಿಳಿದು ರಕ್ಷಿಸಿದ್ದಾರೆ. ದೇವಸ್ಥಾನದ ಬಾವಿಯೊಳಗೆ ಬೆಕ್ಕೊಂದು ಬಿದ್ದಿರುವುದಾಗಿ ದೇವಸ್ಥಾನದ ಸಿಬಂದಿ ಸ್ವಾಮೀಜಿಯವರಿಗೆ ಹೇಳಿದರು.
ಕೂಡಲೇ ಬಾವಿಯತ್ತ ತೆರಳಿದ ಸ್ವಾಮೀಜಿ, ಬಕೆಟ್ ಇಳಿಸಿ ಬೆಕ್ಕನ್ನು ಬಕೆಟ್ ಒಳಗೆ ಬರುವಂತೆ ಪ್ರಯತ್ನಿಸಿದರು. ಅದು ಫಲಕಾರಿಯಾಗದಿದ್ದಾಗ, ಉಟ್ಟ ಖಾವಿಶಾಟಿಯನ್ನು ಸೊಂಟಕ್ಕೆ ಬಿಗಿಯಾಗಿ ಸುತ್ತಿ ಸುಮಾರು ಐದಡಿ ವ್ಯಾಸದ ಬಾವಿಗೆ ಹಗ್ಗದ ಸಹಾಯದಿಂದ ಇಳಿದರು. ತುಸು ದೂರ ಹಗ್ಗದ ಸಹಾಯದಿಂದ ಇಳಿದರೆ ಮತ್ತೆ ಬಾವಿಯೊಳಗಿನ ಅಂಚಿನಲ್ಲಿ ಕಾಲಿಟ್ಟು ಆಚೀಚೆ ಕೈಗಳ ಆಧಾರದಲ್ಲಿ ಇಳಿದು ಬೆಕ್ಕನ್ನು ಬಕೆಟ್ಗೆ ಹಾಕಿ ಮೇಲಕ್ಕೆತ್ತುವಂತೆ ಸೂಚಿಸಿದರು.
ಮೇಲಿಂದ ಬಕೆಟ್ ಎತ್ತಿ ತುಸು ಮೇಲೆ ಬರುವಾಗ ಬೆಕ್ಕು ಹೆದರಿ ಹೊರಕ್ಕೆ ಹಾರಿ ಇನ್ನೊಂದು ಅಂತಸ್ತಿನಲ್ಲಿ ಕುಳಿತುಕೊಂಡಿತು. ಹೇಗೆ ಇಳಿದರೋ ಅದೇ ರೀತಿ ಕೈ, ಕಾಲುಗಳ ಆಧಾರದಲ್ಲಿ ಮೇಲೆ ಹತ್ತಿದ ಸ್ವಾಮೀಜಿ ತುಂಡು ವಸ್ತ್ರವನ್ನು ಮೇಲಿಂದ ಹಾಕಲು ಹೇಳಿ ಅದನ್ನು ಕೈಗೆ ಸುತ್ತಿಕೊಂಡು ಬೆಕ್ಕಿನ ಕುತ್ತಿಗೆ ಹಿಡಿದು ಮತ್ತೆ ಬಕೆಟ್ಗೆ ಹಾಕಲು ಯತ್ನಿಸಿದರು. ಅದು ಸರಿಯಾಗದೆ ಇದ್ದಾಗ ಒಂದೊಂದೆ ಅಂತಸ್ತನ್ನು ಏರಿ ಒಂದು ಕೈಯಲ್ಲಿ ಬೆಕ್ಕನ್ನು ಅಂತಸ್ತಿನಲ್ಲಿರಿಸಿಕೊಂಡು ಮೇಲೆ ಬಂದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.