ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಪ್ರೊ. ಪಟ್ಟಾಭಿರಾಮ ಸೋಮಯಾಜಿ ಯವರನ್ನು ವಿದ್ಯಾರ್ಥಿ ದೆಸೆಯಿಂದಲೇ ಪ್ರತಿಭಾನ್ವಿತರಾಗಿದ್ದರು. ಕನ್ನಡ ಸಾಹಿತ್ಯದ ಪ್ರಖರ ವಿಮರ್ಶಕರಾಗಿದ್ದರು.
ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಧ್ಯಾಪಕರಾಗಿ, ಸಾರ್ವಜನಿಕ ಚಿಂತಕರಾಗಿ ಬೌದ್ದಿಕ ವಲಯದಲ್ಲಿ ಹೆಸರು ಮಾಡಿದ್ದರು. ಹಿಂದುತ್ವದ ಕೋಮುವಾದದ ಅಪಾಯವನ್ನು ಬಹಳ ನಿಶಿತವಾಗಿ ವಿರೋಧಿಸಿದ್ದರು. ಅಲ್ಪಸಂಖ್ಯಾತರ ಪರಿಸ್ಥಿತಿ ಅತ್ಯಂತ ಅಪಾಯದಲ್ಲಿದೆ ಎಂಬ ಆತಂಕ ಅವರನ್ನು ಕಳವಳಕ್ಕೀಡು ಮಾಡಿತ್ತು. ತಾನು ಪ್ರತಿಪಾದಿಸುತ್ತಿದ್ದ ನಿಲುವುಗಳಿಗೆ ತೋರಿದ ಬದ್ದತೆಗಾಗಿ ಹಿಂದುತ್ವದ ಕೋಮುವಾದಿಗಳಿಂದ ತೀವ್ರ ದಾಳಿಗೂ ಒಳಗಾಗಿದ್ದರು.
ಇಂತಹ ದಿಟ್ಟ ನಿಲುವು ಈ ಕಾಲದಲ್ಲಿ ಬಹಳ ಅಪರೂಪವಾದದ್ದು. ಅತ್ಯಂತ ಮಾನವೀಯರಾಗಿದ್ದ ಪಟ್ಟಾಭಿಯವರ ಅಗಲಿಕೆಯು ಕರ್ನಾಟಕದ ಕೋಮುವಾದ ವಿರೋಧಿ ಚಳವಳಿಗೆ ದೊಡ್ಡ ನಷ್ಟ. ಮಂಗಳೂರಿನ ಜನಪರ ಚಳವಳಿಗಳು, ಸೌಹಾರ್ದ ವೇದಿಕೆಗಳು ಅವರ ನಿಧನದ ಸಂದರ್ಭ ಗೌರವ ಪೂರ್ವಕ ಸಂತಾಪಗಳನ್ನು ಸಲ್ಲಿಸಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮುನೀರ್ ಕಾಟಿಪಳ್ಳ (ಡಿವೈಎಫ್ಐ ರಾಜ್ಯಾಧ್ಯಕ್ಷ) ವಾಸುದೇವ ಉಚ್ಚಿಲ (ಸಮುದಾಯ ಕರ್ನಾಟಕ, ಮಂಗಳೂರು) ಪ್ರೊ. ರಾಜೇಂದ್ರ ಉಡುಪ (ನಿವೃತ್ತ ಪ್ರಾಧ್ಯಾಪಕರು, NITK) ಕೆ ಯಾದವ ಶೆಟ್ಟಿ (ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ) ಡಾ. ಕೃಷ್ಣಪ್ಪ ಕೊಂಚಾಡಿ (ಪ್ರಗತಿಪರ ಚಿಂತಕರ ವೇದಿಕೆ) ಪ್ರೊ. ನರೇಂದ್ರ ನಾಯಕ್ (ಖ್ಯಾತ ವಿಚಾರವಾದಿಗಳು) ಮನೋಜ್ ವಾಮಂಜೂರು( ಸಮುದಾಯ ಮಂಗಳೂರು) ಸುನಿಲ್ ಕುಮಾರ್ ಬಜಾಲ್ (ಪ್ರಧಾನ ಕಾರ್ಯದರ್ಶಿ, ಸಿಐಟಿಯು ದಕ್ಷಿಣ ಕನ್ನಡ) ಯಶವಂತ ಮರೋಳಿ (ಅಧ್ಯಕ್ಷರು, ಅಖಿಲ ಭಾರತ ವಕೀಲರ ಸಂಘ, ಮಂಗಳೂರು) ನವೀನ್ ಸೂರಿಂಜೆ (ಅಭಿಮತ ಮಂಗಳೂರು) ವಿದ್ಯಾ ದಿನಕರ್ (ಮಹಿಳಾ ಸಂಘಟನೆಗಳ ಒಕ್ಕೂಟ, ಮಂಗಳೂರು) ಎಂ ದೇವದಾಸ್ (ದಲಿತ ಸಂಘರ್ಷ ಸಮಿತಿ, ದಕ್ಷಿಣ ಕನ್ನಡ) ಮಂಜುಳಾ ನಾಯಕ್ (ಸಾಮರಸ್ಯ ಮಂಗಳೂರು) ರಘು ಎಕ್ಕಾರು (ಸಂಚಾಲಕರು, ದಲಿತ ಸಂಘರ್ಷ ಸಮಿತಿ ಮಂಗಳೂರು)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.