ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ರಾಜ್ಯದಲ್ಲಿ ಬದಲಾದ ರಾಜಕೀಯ ಬೆಳವಣಿಗೆಯ ಇನ್ನೆಲೆಯಲ್ಲಿ ಮಂಗಳೂರಿನ ‘ ಸಂತರು ‘ ಮತ್ತು ಧಾರ್ಮಿಕ ಮುಖಂಡರು ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ವಿರುದ್ಧ ಗೋಹತ್ಯೆ ಮತ್ತು ಮತಾಂತರ ಕಾಯ್ದೆ ಯ ವಿಷಯ ಪ್ರಸ್ತಾಪಿಸಿ ರಾಜ್ಯಪಾಲರು ಮತ್ತು ಪ್ರಧಾನಿ ಮೋದಿ ಬಳಿ ನಿಯೋಗ ತೆರಳುವುದಾಗಿ ಇತ್ತೀಚೆಗೆ ಸಭೆ ಸೇರಿ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಗೋಹತ್ಯೆ ನಿಷೇದ ಕಾಯಿದೆ ಹಿಂಪಡೆಯಬಾರದು,ಮತಾಂತರ ನಿಷೇದ ಕಾಯ್ದೆ ಪುನರ್ ಸ್ಥಾಪಿಸಬೇಕು ತಪ್ಪಿದಲ್ಲಿ ಹೋರಾಟ ಮಾಡುತ್ತೇವೆ ಎಂಬಿತ್ಯಾದಿಯಾಗಿ ವಿಶ್ವ ಹಿಂದೂ ಪರಿಷತ್ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಂಗಳೂರಿನಲ್ಲಿ ಸಭೆ ಸೇರಿದ ಸಂತರು ಕೇಂದ್ರ ಸರಕಾರದ ಮುಂದೆ ಭಾರತದಿಂದ ವಿದೇಶಕ್ಕೆ ರಫ್ತು ಗೊಳ್ಳುವ ಗೋಮಾಂಸ ವ್ಯವಹಾರ ವನ್ನು ಸ್ಥಗಿತ ಗೊಳಿಸುವ ಬೇಡಿಕೆಯನ್ನು ಮಂಗಳೂರಿನ ಸಂತರು ಮಾಡಬೇಕಿದೆ. ಒಂದು ವೇಳೆ ಮಂಗಳೂರಿನ ಸಂತರು ಗೋಮಾಂಸ ರಫ್ತು ನಿಷೇದ ಬೇಡಿಕೆ ಮುಂದಿಡುವುದಾದರೆ ಮುಸ್ಲಿಮರು ನಿಯೋಗದಲ್ಲಿ ಭಾಗಿಯಾಗಲು ಸಿದ್ಧರಿದ್ದಾರೆ . ಮಂಗಳೂರಿನ ಸಂತರು ಈ ಬೇಡಿಕೆ ಮುಂದಿಡಲಿ ಎಂದು ಕೆ. ಅಶ್ರಫ್(ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಪ್ರಕಟನೆಯಲ್ಲಿ ತಿಳಿಸಿದ್ಧಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.