(www.vknews.in) ; ತುಸು ಚಾಮರ ಬೀಸಲಿಚಾಮರಾಜನಗರದಲಿಚುಮು ಚುಮು ಮಳೆಹನಿಗೆ ಜೊತೆಯಾಗಿ ನೆನೆಯಲಿ ನವಜೋಡಿಗಳುಮೈ ಮನ ಬೆಸೆಯುವ ಹಾಗೇ..!
ಆಷಾಢ ತೇರಿಗೆ ನವ ಜೋಡಿಯಾಗಿ ನಿಂತು ಹಣ್ಣು ಜವನವ ಎಸೆಯುವ ಈ ಜೋಡಿಯು ಸಿರಿವಂತನ ಸೊಸೆಯೋ ಬಡವನ ಮಗಳೋ ಇಲ್ಲಿ ಬಲ್ಲವರ್ಯಾರು ಈ ಜಾತ್ರೆಯೊಳಗೆ ಅವಳ ಸೌಂದರ್ಯಕ್ಕೆ ಅವಳೇ ಸಾಟಿ..!
ಗಂಡನ ಪಿಸುಮಾತಿಗೆ ನಾಚಿ ನೀರಾಗಿ ನಿಂತ ಹೆಣ್ಣಿನ ನಗೆಯ ಕಂಡು ಸಿಳ್ಳೆ ಹೊಡೆಯದೀರಿ ಹುಡುಗರೇ ಹುಷಾರ್ ನಮಗೂ ಲಭಿಸಬಹುದು ನವ ಜೋಡಿಗಳಾಗುವ ಸದಾವಕಾಶ ಮುಂದೊಂದು ದಿನ…!
ಪ್ರೀತಿಸುವ ಸಮಯದಿ ಆಣೆ ಬಾಷೆ ಇಟ್ಟು ವಿಧಿ ಆಟದಿಂದ ಬೇರಾಗಿ ಸಪ್ತಪದಿ ತುಳಿದ ಅವಳು ಇವನಿಗೆ ಎದುರಾಗದಿರಲಿ ಇವನು ಮತ್ತೊಬ್ಬಳ ಕೈ ಹಿಡಿದು ನೆಡೆವಾಗ ಇವನನ್ನು ಕಂಡು ಅವಳ ಹೃದಯ ಒಡೆಯದಿರಲಿ..!
ಲವಲವಿಕೆಯ ನಗೆಯ ಜೊತೆಗೆ ಲಗುಬಗೆಯ ಉಡುಪು ತೊಟ್ಟು ಕೈ ಕೈ ಹಿಡಿದು ನೆಡೆಯುತ್ತಿರುವ ನವ ಜೋಡಿಯ ಕಂಡ ಸೂರ್ಯಕೂಡ ಮರೆಯಾಗಬಹುದು ಮೋಡದೂಳಗೆ ಆಷಾಢ ಜಾತ್ರೆಯ ಈ ದಿನ..!
ಕಿಸೆಯೊಳಗಿನ ಕಾಸು ತೆಗೆದು ಸತಿ ಆಸೆಯ ನಿರಾಸೆಗೂಳಿಸದೆ ತುಸು ನಗೆಯ ಬೀರುತ ಸಿಹಿತಿನಿಸುಗಳ ಜೊತೆಗೆ ಮಲ್ಲಿಗೆಯ ಹೂವ ಹಿಡಿದು ನಗುತ್ತಾ ಮನೆಯತ್ತ ಸಾಗುವ ನವ ಜೋಡಿಗಳ ಕನಸುಗಳು ನನಸಾಗಲಿ..!
ಈ ಆಷಾಢ ಮಾಸದ ಜಾತ್ರೆಯ ವಿಶೇಷತೆಯು ನನಗೂ ಕನಸಾಗದಿರಲಿ…!
– ರಮೇಶ್ ನಾರಾಯಣ್ ಭುಜಗನಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.