ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ತಮ್ಮಂದಿರು ಸೇರಿ ಅಣ್ಣನನ್ನು ಇರಿದು ಕೊಲೆಗೈದ ಘಟನೆ ಸುಳ್ಯ ಸಂಪಾಜೆಯಲ್ಲಿ ನಡೆದಿದೆ.
ಆಸ್ತಿ ವಿವಾದ ಹಿನ್ನಲೆಯಲ್ಲಿ ಸಂಪಾಜೆ ಕುದ್ರಪಾಯ ನಿವಾಸಿ ಉಸ್ಮಾನ್ ಎಂಬವರನ್ನು ತನ್ನ ಒಡಹುಟ್ಟಿದ ತಮ್ಮಂದಿರೇ ಸೇರಿ ಚೂರಿಯಿಂದ ಇರಿದು ಕೊಂದ ಭೀಕರ ಘಟನೆ ನಡೆದಿದೆ.
ಸತ್ತಾರ್, ರಫೀಕ್ ಈಸುಬು, ಅಬ್ಬಾಸ್, ಉಸ್ಮಾನ್ ಮೊದಲಾದ ಸಹೋದರರ ಕೃಷಿ ಭೂಮಿ ಸುಮಾರು 50 ಎಕ್ರೆ ಜಾಗ ಸಂಪಾಜೆಯ ಕುದ್ರಾಪಾಯದಲ್ಲಿದ್ದು, ಜಾಗದ ತಕರಾರಿನಿಂದ ವಿವಾದದಲ್ಲಿತ್ತು. ಶುಕ್ರವಾರ ಇವರು ಜಾಗದ ಕಡೆಗೆ ಹೋಗಿದ್ದರು, ಅಣ್ಣ ತಮ್ಮಂದಿರ ನಡುವೆ ಮಾತಿಗೆ ಮಾತು ಬೆಳೆದು ಕೋಪ ತೀವ್ರಗೊಂಡು ಸಹೋದರರು ಸೇರಿ ಉಸ್ಮಾನ್ ಎಂಬವರನ್ನು ಇರಿದು ಕೊಲೆಮಾಡಿರುವುದಾಗಿ ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.