ಕೆಸಿರೋಡು(ವಿಶ್ವಕನ್ನಡಿಗ ನ್ಯೂಸ್): ಸ್ವಸ್ಥ್ಯ ಸಮಾಜಕ್ಕೆ ಸುಸಂಸ್ಕೃತ ಮಕ್ಕಳು ಎಂಬ ಧ್ಯೇಯ ವಾಕ್ಯ ದೊಂದಿಗೆ ಕೋಟೆಕಾರ್ ಮತ್ತು ತಲಪಾಡಿ ಸರ್ಕಲ್ ಗಳು ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡ ಮಾದಕ ವಸ್ತುಗಳ ವಿರುದ್ಧ ಜನಜಾಗೃತಿ ಅಭಿಯಾನ ಕಾರ್ಯಕ್ರಮದ ಸಮಾರೋಪ ಸಮಾರಂಭವು ಇಂದು ಕೆ ಸಿ ರೋಡ್ ಜಂಕ್ಷನ್ ನಲ್ಲಿ ವಿಜ್ರಂಭಣೆಯಿಂದ ಸಮಾಪ್ತಿ ಗೊಂಡಿತು.
ಸರ್ಕಲ್ ವ್ಯಾಪ್ತಿಯ ಪ್ರತೀ 14 ಮೊಹಲ್ಲಾಗಳಲ್ಲಿ ಮನೆ ಮನೆಗೆ ಕರ ಪತ್ರ ವಿತರಣೆ, ಯೂನಿಟ್ ಕನ್ವೆಂಷನ್, ಮಹಿಳಾ ಸೆಮಿನಾರ್, ಲೀಡರ್ಸ್ ಮೀಟ್ ಮುಂತಾದ ಅನೇಕ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿತ್ತು.
ಉಚ್ಚಿಲ ದರ್ಗಾ ಝಿಯಾರತ್ ನಂತರ ಉಚ್ಚಿಲ ಮುದರ್ರಿಸ್ ಇಬ್ರಾಹಿಂ ಫೈಝಿ ಉಸ್ತಾದರು ಜಾಥಾ ನಾಯಕ ಬಶೀರ್ ಅಹ್ಸನಿ ಉಸ್ತಾದ್ ರಿಗೆ ಎಸ್ ವೈ ಎಸ್ ಧ್ವಜ ನೀಡುವ ಮೂಲಕ ಆರಂಭ ಗೊಂಡ ಜಾಥಾ ಕೆ ಸಿ ರೋಡ್ ಜಂಕ್ಷನ್ ನಲ್ಲಿ ಸಮಾಪ್ತಿ ಗೊಂಡಿತು.
ಕಾರ್ಯಕ್ರಮದಲ್ಲಿ ಎಸ್ ಜೆ ಎಮ್ ಅಧ್ಯಕ್ಷ ಅಬ್ದುಲ್ಲ ಮದನಿ, ಎಸ್ ಎಂ ಎ ಅಧ್ಯಕ್ಷ ಕೆ ಎಂ ಅಬ್ಬಾಸ್, ಕೆ ಎಂ ಜೆ ಕೋಟೆಕಾರ್ ಸರ್ಕಲ್ ಅಧ್ಯಕ್ಷ ಪೆರಿಬೈಲ್ ಅಬ್ಬಾಸ್ ಹಾಜಿ,ಕೆ ಎಂ ಜೆ ತಲಪಾಡಿ ಸರ್ಕಲ್ ಅಧ್ಯಕ್ಷ ಪಿಲಿಕೂರ್ ಬಾವಹಾಜಿ, ಉಚ್ಚಿಲ ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ತಲಪಾಡಿ ಬಿಜೇಎಂ ಅಧ್ಯಕ್ಷ ಯಾಕೂಬ್, ಕೆಸೀರೋಡ್ ಮಸ್ಜಿದ್ ಅಧ್ಯಕ್ಷ ಎ ಎಂ ಅಬ್ಬಾಸ್ ಹಾಜಿ, ಎಸ್ ಎಸ್ ಎಫ್ ತಲಪಾಡಿ ಸೆಕ್ಟರ್ ಅಧ್ಯಕ್ಷ ಮುಸ್ತಫ, ಎಸ್ ಎಸ್ ಎಫ್ ಕೋಟೆಕಾರ್ ಸೆಕ್ಟರ್ ಅಧ್ಯಕ್ಷ ಜಾಬಿರ್, ಎಸ್ ವೈ ಎಸ್ ತಲಪಾಡಿ ಸರ್ಕಲ್ ಅಧ್ಯಕ್ಷ ಮುಸ್ತಫ ಜುಹರಿ, ಎಸ್ ವೈ ಎಸ್ ಕೋಟೆಕಾರ್ ಸರ್ಕಲ್ ಅಧ್ಯಕ್ಷ ಶಬೀರ್ ಅಷ್ಹರಿ, ಹಾಗೂ ಇತರ ಸಂಘಟನಾ ನಾಯಕರುಗಳು ಭಾಗವಹಿಸಿದರು, ಎಸ್ ವೈ ಎಸ್ ರಾಜ್ಯ ನಾಯಕ ಮೋಂಟು ಗೋಳಿ ಸಿದ್ದೀಖ್ ಉಸ್ತಾದರು ಹಾಗೂ ಮಅರೂಫ್ ಸುಲ್ತಾನಿ ಉಸ್ತಾದರು ಮುಖ್ಯ ಭಾಷಣ ಮಾಡಿದರು.ಆರಂಭದಲ್ಲಿ ಬಶೀರ್ ಅಹ್ಸನಿಉಸ್ತಾದ್ ರು ಸ್ವಾಗತಿಸಿ ಕನ್ವೀನರ್ ಎ ಎಚ್ ಸಿರಾಜ್ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.