(www.vknews.in) : ಯು. ಟಿ.ಖಾದರ್ ರವರ ಪಾದರಸದಂತಹ ಚಟುವಟಿಕೆಗಳಲ್ಲಿ,ಜನಪ್ರಿಯತೆಯಲ್ಲಿ ಸಿಂಹಪಾಲು ಅವರ ಆಪ್ತ ಕಾರ್ಯದರ್ಶಿಯಾಗಿರುವ ಮಹಮ್ಮದ್ ಲಿಬ್ಝತ್ ರವರದ್ದು ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಜೇಬಲ್ಲಿರುವ ನಾಲ್ಕು ಮೊಬೈಲ್ ಗಳು ಸದಾ ರಿಂಗುಣಿಸುತ್ತಿರುವಾಗಲೂ ಯಾವುದೇ ಅಸಹನೆ ತೋರದೆ ಎಲ್ಲದಕ್ಕೂ ಉತ್ತರಿಸುವ ಲಿಬ್ಝತ್,ಮಧ್ಯರಾತ್ರಿ 3 ಗಂಟೆಗೆ ಕರೆ ಮಾಡಿದರೂ ಉತ್ತರಿಸುವ ಅಪರೂಪದ ವ್ಯಕ್ತಿತ್ವದವರು.
ಮಿಸ್ಕಾಲ್ ಕೊಟ್ಟರೂ ತಿರುಗಿ ಕರೆ ನೀಡುವ ಲಿಬ್ಝತ್ ರವರ ಮೊಬೈಲ್ ಗೆ ಕಳೆದ ಕೆಲವು ದಿನಗಳಲ್ಲಿ ಕಾಲ್ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಇರಲಿಲ್ಲ.ಇದು ನನಗೆ ಮಾತ್ರವಲ್ಲ ಯು.ಟಿ.ಖಾದರ್ ರವರ ಅಭಿಮಾನಿಗಳಿಗೆ ಆಶ್ಚರ್ಯವನ್ನುಂಟುಮಾಡಿತ್ತು. ಯಾವುದೇ ಸಮಯದಲ್ಲೂ ಕರೆ ಮಾಡಿದರೂ ಮರುಕ್ಷಣವೇ ಉತ್ತರಿಸುತ್ತಿದ್ದ ಲಿಬ್ಝತ್ ಯಾಕೆ ಈ ರೀತಿ ಮಾಡಿದರು ಎಂಬುದು ಎಲ್ಲರಿಗೂ ಯಕ್ಷ ಪ್ರಶ್ನೆಯಾಗಿತ್ತು.
ನಾನು ಈ ಬಗ್ಗೆ ಲಿಬ್ಝತ್ ರನ್ನು ನೇರವಾಗಿ ಕೇಳಿದಾಗ* “ವಿಧಾನಸಭೆಯಲ್ಲಿ ಕಲಾಪ ನಡೆಯುವಾಗ ನಾನು ಸ್ಪೀಕರ್ ಜೊತೆ ಇರಬೇಕಾಗುತ್ತದೆ.ಕಲಾಪ ನಡೆಯುವಲ್ಲಿ ಮೊಬೈಲ್ ಜಾಮರ್ ಅಳವಡಿಸಿದೆ.ಎಲ್ಲಾ ಮೊಬೈಲ್ ಗಳನ್ನು ಹೊರಗಡೆ ಇಟ್ಟು ಹೋಗುತ್ತೇನೆ.ಇದರಿಂದಾಗಿ ಕರೆ ಮಾಡಿದವರಿಗೆ ತೊಂದರೆಯಾಗಿದೆ ” ಎಂದು ನೊಂದುಕೊಂಡರು.
ಇದೀಗ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡ ಲಿಬ್ಝತ್ ,ಹೊರಗಡೆ ಕೊಠಡಿಯಲ್ಲಿಟ್ಟ ತನ್ನ ಮೊಬೈಲ್ ಗೆ ಕರೆ ಬಂದರೆ ಅದಕ್ಕೆ ಉತ್ತರಿಸುವಂತೆ ಅಲ್ಲಿ ಇರುವವರಿಗೆ ಸೂಚಸಿದ್ದಾರೆ. ಇದರಿಂದಾಗಿ ಲಿಬ್ಝತ್ ಸದನದ ಒಳಗಿದ್ದರೂ ಕರೆ ಮಾಡಿದವರಿಗೆ ಸ್ಪೀಕರ್ ರ ಬಗ್ಗೆ ಮಾಹಿತಿ ದೊರೆಯಲಿದೆ. ತನಗೆ ಬಂದ ಕರೆಗಳಿಗೆ ಉತ್ತರಿಸುವ ವ್ಯವಸ್ಥೆ ಮಾಡಿದ್ದರಿಂದ ಯು.ಟಿ.ಅಭಿಮಾನಿಗಳಿಗೆ ಎಂದಿನಂತೆ ಪರಿಹಾರ ಸಿಗುವಂತೆ ಮಾಡಿದ ಲಿಬ್ಝತ್ ರವರ ಜನಪರ ಕಾಳಜಿಗೆ ಒಂದು ಬಿಗ್ ಸೆಲ್ಯೂಟ್.
✍️ ಅಬೂಬಕರ್ ಅನಿಲಕಟ್ಟೆ ವಿಟ್ಲ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.