ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಭಾರತದಲ್ಲಿ ಜನರನ್ನು ನಿರಂತರ ಭಯದ ವ್ಯಾಪ್ತಿಯಲ್ಲಿಯೇ ಉಳಿಸಿಕೊಳ್ಳಲು ಮತ್ತು ಆ ಮೂಲಕ ಮತೀಯ ಧೃವೀಕರಣ ಗೊಳಿಸಿ ಅಧಿಕಾರದಲ್ಲಿ ಮೆರೆಯುವ ಷಡ್ಯಂತ್ರದ ಭಾಗವಾಗಿ ಸಂಘಪರಿವಾರದ ಕಳೆದ ಸಾಲಿನ ಪ್ರಯತ್ನ ಕರ್ನಾಟಕದ ಸರ್ವಜನಾಂಗದ ಶಾಂತಿಯ ತೋಟದಲ್ಲಿ ವಿಫಲವಾಗುತ್ತಿದ್ದಂತೆ ತಮ್ಮ ಕಾರ್ಯಯೋಜನೆಯನ್ನು ಮಣಿಪುರದಲ್ಲಿ ಅನುಷ್ಟಾನಿಸಲಾಗಿದೆ.
ಜನರು ಭಿನ್ನ ಸಮುದಾಯದ ಜನರನ್ನು ನೋಡಿ ಸದಾಕಾಲ ಭಯದ ವ್ಯಾಪ್ತಿಯಲ್ಲಿಯೇ ಉಳಿದರೆ ಮತೀಯ ಧೃವೀಕರಣ ಗೊಂಡು ಮತಗಳ ಚಲಾವಣೆ ನಿರ್ಧಿಷ್ಟ ಪಕ್ಷಗಳ ಪಾಲಾಗುವ ಸೂತ್ರವನ್ನು ಸಮರ್ಕವಾಗಿ ಬಳಸಿಕೊಂಡ ಆರ್.ಎಸ್.ಎಸ್ ಮಣಿಪುರದ ಗಲಭೆಯನ್ನು ರಾಜ್ಯ ಪ್ರಾಯೋಜಿತ ವಾಗಿಯೆ ಸಮರ್ಪಕವಾಗಿ ನಡೆಸಿದೆ.ಕೇಂದ್ರ ಸರ್ಕಾರದ ಯೋಜಿತ ಕೃತ್ಯವೇ ಮಣಿಪುರ ಜನಾಂಗೀಯ ಹತ್ಯೆ. ಈ ಹಿಂದೆ ಗುಜರಾತ್ ಗಲಭೆಯನ್ನು ಇದೇ ರೀತಿಯಲ್ಲಿ ಅನುಷ್ಟಾನಿಸಲಾಯಿತು.
ಈ ದೇಶದ ಬಹಸಂಖ್ಯಾತ ಜನರು ಆರ್.ಎಸ್.ಎಸ್ ನ ಷಡ್ಯಂತ್ರವನ್ನು ಇನ್ನಾದರೂ ಅರಿಯಬೇಕಿದೆ.ಜನತೆ ಈ ಕೃತ್ಯದ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕಿದೆ.
ಕೆ.ಅಶ್ರಫ್(ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.