ಹರೇಕಳ(ವಿಶ್ವಕನ್ನಡಿಗ ನ್ಯೂಸ್): ಮಣಿಪುರದ ಆ(ಕುಕಿ) ಹೆಣ್ಣು ಮಕ್ಕಳಿಗೆ ಆಗಿರಬಹುದಾದ ಮಾನಸಿಕ ಆಘಾತ,ಮನೋಯಾತನೆ, ಯೋಚಿಸಿದರೆ ನಾವೆಂಥಾ ಕ್ರೂರ ಸಮಾಜದಲ್ಲಿ ಇದ್ದೇವೆ ಅನಿಸಿ ಬಿಡುತ್ತದೆ, ನೂರಾರು ಕ್ರೂರಿ ಗಂಡಸರ ಗುಂಪು ಬೆತ್ತಲೆ ಮೆರವಣಿಗೆ ಮಾಡಿ ದಾರಿಯುದ್ಧಕ್ಕೂ ಹಿಂಸೆ ನೀಡಿ, ಪೈಶಾಚಿಕ ಕ್ರತ್ಯ ವೆಸಗಿ, ಸಾಮೂಹಿಕ (ಅತ್ಯಚಾರ ನಡೆಸಿದೆ, (ಹೆಣ್ಣನ್ನು ಮಾನವ ಸಮಾಜ ದಲ್ಲಿ ಅತ್ಯಂತ ಗೌರವ ವಾಗಿಕಾಣುವ ಮಾನವ ಸಮುದಾಯ, ಮಣಿಪುರದಲ್ಲಿ ನಡೆದ ಘಟನೆಯಿಂದ ಇಡೀ ಭಾರತ ದೇಶವೇ ತಲೆತಗ್ಗಿಸುವಂತೆ ಮಾಡಿದೆ ದೇಶದಲ್ಲಿಯೂ,ಅಂತರ್ ರಾಷ್ಟ್ರೀಯ ಮಟ್ಟದಲ್ಲಿಯೂ ಕೂಡ, ಈ ಒಂದು, ಘಟನೆಯಿಂದ ( ದೇಶ ) ವನ್ನು ತಲೆ ತಗ್ಗಿಸುವನಂತೆ ಮಾಡಿದೆ.
ಮಣಿಪುರದಲ್ಲಿ ಎರಡುವರೆ ತಿಂಗಳಿಂದ ಹಿಂಸಾಚಾರ ನಡೆಯುತ್ತಿದೆ 160ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ,ಸರಕಾರ ಮಾತ್ರ ಕಿವುಡು ಮತ್ತು ಕುರುಡಾಗಿದೆ, ಪೈಶಾಚಿಕ ಕ್ರತ್ಯ ವೆಸಗುವ ಕ್ರೂರಿ ಗಳಿಗೆ ಕಾನೂನಿನ ಭಯವಿಲ್ಲ, ಎನ್ನೂದಂತೂ ಮೆಲ್ನೋಟ ಕಂಡು ಬರುತ್ತಿದೆ.
ಆದುದರಿಂದ ಇನ್ನಾದರೂ ಸರ್ಕಾರ ಎಚ್ಚೆತ್ತು ಕೊಂಡು, ಪೈಶಾಚಿಕ ಕೃತ್ಯ ವ್ಯಸಗಿದ ಕ್ರೂರಿಗಳಿಗೆ ಕಾನೂನಿನಡಿಯಲ್ಲಿ, (ಕಠಿಣ ವಾದ ಶಿಕ್ಷೆಯನ್ನು ನೀಡಬೇಕಾಗಿದೆ, ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಜಿಲ್ಲಾ ಕಾರ್ಯದರ್ಶಿ ರಿಯಾಝ್ ಹರೇಕಳ ಪತ್ರಿಕೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.