ಕೋಟೆಕಣಿ(ವಿಶ್ವಕನ್ನಡಿಗ ನ್ಯೂಸ್): ವಿಶ್ವಕಂಡ ಅತ್ಯುನ್ನತ ಉಲಮಾ ಒಕ್ಕೂಟ ಸಮಸ್ತದ ಆದೇಶ ದ ಮೆರೆಗೆ ಮದ್ರಸಾದ್ಯಂತ ವರ್ಷಂಪ್ರತಿ ಸಡೆಸಿ ಬರುವ ಮುಅಲ್ಲಿಂಡೇ ಕಾರ್ಯಕ್ರಮ ವು ಮದರಸ ಮಕ್ಕಳು ಹಾಗೂ ಜಮಾಅತ್ ಸದಸ್ಯರ ಸಹಕಾರ ದಿಂದ ಬಹಳ ವಿಜೃಂಭನೆಯಿಂದ ಶನಿವಾರ ರಾತ್ರಿ ಮಗ್ರಿಬ್ ನಮಾಝಿನ ಬಂತರ ತ್ವಾಹ ಜುಮಾ ಮಸೀದಿಯ ಖತೀಬರಾದ ಅಬ್ದುಲ್ ಮಜೀದ್ ಪೈಝೀ ಉಪ್ಪಿನಂಗಡಿ ಇವರ ನೇತ್ರತ್ವದಲ್ಲಿ ನಡೆಯಿತು.
ದುಆದ ಮೂಲಕ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ತ್ವಾಹ ಜುಮಾಮಸೀದಿಯ ಕಾರ್ಯ ದರ್ಶಿಯಾದ ಅಬ್ದುಲ್ ಲತ್ತೀಫ಼್ ರವರು ಸಭೆಗೆ ಸ್ವಾಗತ ನಿರ್ವಸಿದರು ಮುನವ್ವಿರುಲ್ ಇಸ್ಲಾಂ ಮದರಸ ಅಧ್ಯಾಪಕ ರಾದ ಅಬೂಬಕ್ಕರ್ ಸಿದ್ದೀಕ್ ಅಸ್ಲಮಿ ಸಭೆಯನ್ನು ಉದ್ಘಾಟನೆ ಮಾಡಿದರು.
ಆಶಂಸ ಭಾಷಣ ಮುನವ್ವಿರುಲ್ ಇಸ್ಲಾಂ ಮದರಸ ಅಧ್ಯಾಪಕ ರಾದ ಖಾಲಿದ್ ಮದನಿ ನಿವರ್ಸಿದರು ,ಗುರುವೃಂದ ವರನ್ನು ಬಹುಮಾನಿಸುದರ ಮಹತ್ವವನ್ನು ಸ್ಥಳೀಯ ಖತೀಬರಾದ ಅಬ್ದುಲ್ ಮಜೀದ್ ಫೈಝೀ ಸವಿಸ್ತಾರವಾಗಿ ತಿಳಿಸಿದರು.ಹಾಗೂ ಮುನವ್ವಿರುಲ್ ಇಸ್ಲಾಂ ಮದರಸಾ ಅಧ್ಯಾಪಕ ರನ್ನು ತ್ವಾಹ ಜುಮಾ ಮಸೀದಿಯ ಆಡಳಿತ ಕಮಿಟಿ ಹಾಗೂ S k S S F ಕೋಟೆಕಣಿ ಯೂನಿಟ್ ವತಿಯಿಂದ ಸನ್ಮಾನಿಸಲಾಯಿತು.
S K S S F ಕೋಟೆಕಣಿ ಯೂನಿಟ್ ಅಧ್ಯಕ್ಷ ರಾದ ನವಾಝ್ ಶರೀಫ಼್ ಸಭೆಯನ್ನು ನಿರೂಪಿಸಿದರು, ವೇದಿಕೆಯಲ್ಲಿ ತ್ವಾಹ ಜುಮಾ ಮಸೀದಿಯ ಅಧ್ಯಕ್ಷ ರಾದ ಬಶೀರ್ , ಉಪಾಧ್ಯಕ್ಷ ರಾದ ಅಹ್ಮದ್ ಬಾವ ,ಮಾಜೀ ಅಧ್ಯಕ್ಷ ರಾದ ಹನೀಫ಼್ ಹಾಜಿ , ಮುಹಮ್ಮದಾಕ ಹಾಗೂ ಜಮಾತರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.