ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಮತೀಯ ಗಲಭೆಳು ಮತ್ತು ಕೋಮು ಉದ್ವಿಗ್ನತೆ ಸೃಷ್ಟಿಯಿಂದಲೆ ಅಧಿಕಾರವನ್ನು ನಿಯಂತ್ರಣದಲ್ಲಿ ಇಡುವ ವೈದಿಕ ಯೋಜಿತ ಪದ್ಧತಿಯ ಅನುಷ್ಟಾನ ಎಂಬಂತೆ, ಈ ಹಿಂದಿನ ಗುಜರಾತ್, ಉತ್ತರ ಪ್ರದೇಶ,ಮುಜಾಫರ್ ನಗರ,ಕರ್ನಾಟಕದ ಕರಾವಳಿ ಜಿಲ್ಲೆಗಳು,ಮಣಿಪುರ ಮತ್ತು ಪ್ರಸ್ತುತ ಹರ್ಯಾಣದ ಗುರುಗ್ರಾಮ ಗಲಭೆಗಳು ಸಂಘ ಪರವಾರದ ಯೋಜನೆಯ ಮುಂದುವರಿದ ಭಾಗವಾಗಿದೆ.
ಹರ್ಯಾಣದಲ್ಲಿ ಈಗಾಗಲೇ ಮುಕ್ತವಾಗಿ ಧಾರ್ಮಿಕ ಆಚರಣೆಗಳಿಗೆ ಅಡ್ಡಿಯಾಗುವ ರೀತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಮಾಝ್ ನಿರ್ವಹಣೆಗೆ ವಿರೋಧ ವ್ಯಕ್ತವಾಗಿತ್ತು. ಆದರೆ ಗುರುಗ್ರಾಮದಲ್ಲಿ ಅಸ್ತಿತ್ವದಲ್ಲಿ ಇರುವ ಏಕೈಕ ಮಸೀದಿಯ ಧಾರ್ಮಿಕ ಉಪ ಗುರು ವರನ್ನು ಸಂಘೀ ಪ್ರೇರಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ನಡೆಸಿದ್ದು ಮತ್ತು ಮಸೀದಿಗೆ ಬೆಂಕಿ ಹಚ್ಚಿ ನಾಶಪಡಿಸಿದ ಕೃತ್ಯ ಧಾರ್ಮಿಕ ಸ್ವಾತಂತ್ರ್ಯದ ಹರಣವಾಗಿದೆ. ಈ ಕೃತ್ಯ ಮಣಿಪುರದಲ್ಲಿ ನಡೆದ ಜನಾಂಗೀಯ ಹತ್ಯೆಯ ಮುಂದುವರಿದ ಭಾಗವಾಗಿದೆ. ಪರಿಸ್ಥಿತಿಯ ಮಾಹಿತಿ ಹೊರಗೆ ಲಭ್ಯವಾಗದೇ ಇರುವಂತೆ ಇಂಟರ್ನೆಟ್ ಸ್ಥಗಿತ ಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಪ್ರಾಯೋಜತ್ವದಲ್ಲಿಯೆ ಸಂಘ ಪರಿವಾರವನ್ನು ಗಲಭೆ ಉತ್ತೇಜಿಸಲು ಪ್ರಯತ್ನಿಸುವಂತಿದೆ.
ಕೆ.ಅಶ್ರಫ್(ಮಾಜಿ ಮೇಯರ್) ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.